Advertisement

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

10:56 PM Nov 26, 2020 | mahesh |

ಬೆಂಗಳೂರು: ಅಧಿಕಾರಿಯೋರ್ವ ಅಮಾನತುಗೊಂಡ ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥವಾದರೂ, ಆ ಅಧಿಕಾರಿಯನ್ನು ಹಿಂದಿದ್ದ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

Advertisement

ನೌಕರನು ದೀರ್ಘಾವಧಿವರೆಗೆ ಅಮಾನತ್ತಿನಲ್ಲಿರುವುದರಿಂದ ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತಿದೆ. ಅದನ್ನು ತಪ್ಪಿಸಲು ಅಮಾನತುಗೊಂಡ ಆರು ತಿಂಗಳೊಳಗೆ ಇಲಾಖಾ ವಿಚಾರಣೆ ಆರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದಲ್ಲಿ ಅಂತಹ ಅಧಿಕಾರಿಯನ್ನು ರದ್ದುಗೊಳಿಸುವ ಅಥವಾ ಮುಂದುವರಿಸುವ ಬಗ್ಗೆ ಸಕ್ಷಮ ಪ್ರಾಧಿಕಾರ ತೀರ್ಮಾನ ತೆಗೆದುಕೊಳ್ಳಬೇಕು. ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ, ಅವರ ಅಮಾನತು ರದ್ದಾಗಿದೆ ಎಂದೇ ಭಾವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮಾನತುಗೊಂಡ ಅಧಿಕಾರಿ ವಿರುದ್ಧ 6 ತಿಂಗಳೊಳಗೆ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೆ, ಅಮಾನತು ಅವಧಿ ಮುಗಿದ ಬಳಿಕವೂ ಕಚೇರಿಗೆ ಹಾಜರಾಗದಿದ್ದರೆ, ಆ ಅವಧಿಯನ್ನು ರಜೆ ಎಂದು ಪರಿಗಣಿಸಬೇಕು. ಭ್ರಷ್ಟಾಚಾರದ ಸಂದರ್ಭದಲ್ಲಿ ತನಿಖಾ ಸಂಸ್ಥೆಯು ತಪ್ಪಿತಸ್ಥ ಅಧಿಕಾರಿ ವಿರುದ್ಧ ಅಮಾನತು ಮುಂದುವರಿಸುವಂತೆ ಮನವಿ ಮಾಡಿದರೆ ಸಕ್ಷಮ ಪ್ರಾಧಿಕಾರ ಪರಿಗಣಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next