Advertisement

ಸರ್ಚ್‌ ವಾರಂಟ್‌ ಮುನ್ನ ಸಮನ್ಸ್‌ನ ಆವಶ್ಯಕತೆ ಇಲ್ಲ

02:00 AM Jan 21, 2021 | Team Udayavani |

ಬೆಂಗಳೂರು: ಅಪರಾಧ ಪ್ರಕರಣಗಳ ಸಂಬಂಧ “ಸರ್ಚ್‌ ವಾರೆಂಟ್‌’ ಜಾರಿಗೊಳಿಸುವ ಮೊದಲು ಎಲ್ಲ ಸಂದರ್ಭದಲ್ಲೂ ಸಮನ್ಸ್‌ ನೀಡುವ ಆವಶ್ಯಕತೆ ಇಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಡಿ.ಜೆ., ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ತಮ್ಮ ಪಕ್ಷದ ಕಚೇರಿಯಲ್ಲಿ ಶೋಧ ನಡೆಸಲು ವಾರೆಂಟ್‌ ಜಾರಿ ಮಾಡಿದ್ದ 44ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಎಸ್‌ಡಿಪಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ಸೆಕ್ಷನ್‌ 93(1)(ಸಿ) ಪ್ರಕಾರ ಸಮನ್ಸ್‌ ನೀಡದೆ ಶೋಧ ನಡೆಸಲು ವಾರೆಂಟ್‌ ಜಾರಿಗೊಳಿಸಬಹುದು. ಅದರಂತೆ ಅಪರಾಧ ಪ್ರಕರಣಗಳ ಸಂಬಂಧ ಎಲ್ಲ ಸಂದರ್ಭದಲ್ಲೂ ಶೋಧನಾ ವಾರೆಂಟ್‌ ಜಾರಿಗೊಳಿಸುವ ಮೊದಲು ಸಮನ್ಸ್‌ ನೀಡುವ ಆವಶ್ಯಕತೆ ಇಲ್ಲ. ವಿಚಾರಣಾ ನ್ಯಾಯಾಲಯಗಳು ಸಂದರ್ಭಕ್ಕೆ ಅನುಸಾರ ಸರ್ಚ್‌ ವಾರೆಂಟ್‌ ಜಾರಿಗೊಳಿಸಬಹುದು ಎಂದು ನ್ಯಾಯಮೂರ್ತಿಗಳು  ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next