Advertisement

Sabarimala darshan; ಸ್ಪಾಟ್‌ ಬುಕಿಂಗ್‌ ಇಲ್ಲ: ಸಚಿವ

01:46 AM Oct 14, 2024 | Team Udayavani |

ತಿರುವನಂತಪುರ: ಶಬರಿಮಲೆಯಲ್ಲಿ ಸ್ಪಾಟ್‌ ಬುಕಿಂಗ್‌ (ಸ್ಥಳದಲ್ಲೇ ಕಾಯ್ದಿರುಸುವಿಕೆ) ಇರುವುದಿಲ್ಲ. ಆದರೆ ವಾರ್ಷಿ­ಕವಾಗಿ ನಡೆಯುವ ಮಕರವಿ­ಳಕ್ಕು ತೀರ್ಥಯಾತ್ರೆ ವೇಳೆ ಅಯ್ಯಪ್ಪ ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರಿಗೂ ದರ್ಶನ ಸಿಗಲಿದೆ ಎಂದು ಕೇರಳ ದೇವಸ್ವಂ ಸಚಿವ ವಿ.ಎನ್‌.ವಾಸವನ್‌ ಹೇಳಿದ್ದಾರೆ. ಬುಕಿಂಗ್‌ಗೆ ಅವಕಾಶ ನೀಡದಿರುವ ಮತ್ತು ವರ್ಚುವಲ್‌ ಕ್ಯೂ ವ್ಯವಸ್ಥೆ ಮೂಲಕ ಮಾತ್ರ ದರ್ಶನಕ್ಕೆ ಅವಕಾಶ ನೀಡುವ ಯೋಜನೆ ಸರಕಾರ ಮುಂದುವರಿಸಿದರೆ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದ್ದರಿಂದ ಸಚಿವರು ಈ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next