Advertisement

ಡಿಸಿಎಂ ಗೋವಿಂದ ಕಾರಜೋಳ ಕಾರ್ಯಕ್ರಮದಲ್ಲಿ ಕಾಣದ ಸಾಮಾಜಿಕ ಅಂತರ!

01:18 PM Jun 16, 2020 | keerthan |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಮೇಲ್ಸೇತುವೆಯನ್ನು ಇಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕಾರ್ಪಣೆಗೊಳಿಸಿದರು. ಆದರೆ ಡಿಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಣಲೇ ಇಲ್ಲ!

Advertisement

ಕಾರ್ಯಕ್ರಮದಲ್ಲಿ ಸ್ವತಃ ಡಿಸಿಎಂ ಗೋವಿಂದ ಕಾರಜೋಳ ಅವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು  ಹೇಳಿದರೂ ಸಹಿತ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜನತೆ ಪಾಲಿಸಲಿಲ್ಲ. ಡಿಸಿಎಂ ಮುಂದೆ ಮುಗಿಬಿದ್ದು ಜನತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದನ್ನು ನೋಡಿದ ಡಿಸಿಎಂ ತಾವೇ ಕೆಲ ನಿಮಿಷ ಸುಮ್ಮನೆ ನಿಂತು ಜನರು ದೂರ ನಿಲ್ಲು ಗುಂಪು ಸೇರಬೇಡಿ ಎಂದರೂ ಜನ ಅವರ ಮಾತು ಆಲಿಸಲಿಲ್ಲ.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಸಹಿತ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರೂ ಡಿಸಿಎಂ ಕಾರ್ಯಕ್ರಮದಲ್ಲಿ ಅದು ಕಾಣಲಿಲ್ಲ. ಇನ್ನು ಕೃಷಿ ಸಚಿವ ಬಿ ಸಿ ಪಾಟೀಲ್ ಸಹಿತ ಭಾಷಣದುದ್ದಕ್ಕೂ ಸಾಮಾಜಿಕ ಅಂತರ ಕಾಪಾಡಿ ಎನ್ನುತ್ತಲೆ ತಮ್ಮ ಭಾಷಣ ಮುಗಿಸಿದರು.

ಇನ್ನು ಪೊಲೀಸರಂತೂ ಜನತೆಗೆ ಸಾಮಾಜಿಕ ಅಂತರ ಕಾಪಾಡಿ, ಕಾಪಾಡಿ ಎಂದು ಹೇಳೀ ಹೇಳಿ ಸುಸ್ತು ಹೊಡೆದರು. ಜನ ದಟ್ಟಣೆಯ ಮಧ್ಯದಲ್ಲಿಯೇ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next