Advertisement

ಕಟ್ಟೆಮಕ್ಕಿ –ಹೊಗೆಮನೆ ರಸ್ತೆ : ಇನ್ನೂ ಆಗಿಲ್ಲ ಡಾಮರು

08:44 PM Oct 08, 2019 | mahesh |

ಹಾಲಾಡಿ: ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ, ಕಟ್ಟೆಮಕ್ಕಿಯಿಂದ ಹೊಗೆಮನೆಗೆ ಹೋಗುವ ರಸ್ತೆ 2 ದಶಕ ಕಳೆದರೂ, ಇನ್ನೂ ಡಾಮರು ಭಾಗ್ಯ ಮಾತ್ರ ಸಿಕ್ಕಿಲ್ಲ. ಮಳೆಗಾಲದಲ್ಲಿ ಕೆಸರುಮಯ, ಬೇಸಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಈ ಭಾಗದ ಜನ ಹೈರಾಣಾಗಿ ಹೋಗಿದ್ದಾರೆ.

Advertisement

ಕಟ್ಟೆಮಕ್ಕಿಯಿಂದ ಹೊಗೆಮನೆಗೆ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರದ ಈ ರಸ್ತೆಗೆ 2 ದಶಕಗಳಿಂದಲೂ ಡಾಮರೀಕರಣವಾಗಬೇಕು ಎನ್ನುವ ಈ ಭಾಗದ ಜನರ ಬೇಡಿಕೆಯಿದೆ. ಸುಮಾರು 25 ವರ್ಷಗಳಿಂದಲೂ ಮಣ್ಣಿನ ರಸ್ತೆಯಾಗಿಯೇ ಇದ್ದರೂ, ಇಲ್ಲಿನ ಜನರ ಬಹು ಕಾಲದ ಬೇಡಿಕೆಗೆ ಮಾತ್ರ ಈವರೆಗೆ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಮನ್ನಣೆಯೇ ನೀಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಸಸಿಹಿತ್ಲು, ತೆಂಕಬೆಟ್ಟು, ಹೊಗೆಮನೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಸುಮಾರು 25 ಕ್ಕಿಂತಲೂ ಹೆಚ್ಚಿನ ಮನೆಯಿದೆ. ಶಾಲಾ ವಾಹನಗಳು, ಇತರೆ ವಾಹನಗಳು ಕೂಡ ಸಂಚರಿಸುತ್ತವೆ. ಸುಮಾರು 30 ಮಂದಿ ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿದ್ದಾರೆ.

ಧೂಳುಮಯ ರಸ್ತೆ
ಸಾರ್ವಜನಿಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಈ ಭಾಗದ ಜನರು, ಮಕ್ಕಳು ನಡೆದುಕೊಂಡೇ ಹೋಗುವುದು ಹೆಚ್ಚು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚರಂಡಿಯೂ ಇಲ್ಲದ ಕಾರಣ ರಸ್ತೆಯಲ್ಲಿಯೇ ನೀರು ಹರಿದು ಕೆಸರುಮಯವಾಗಿದ್ದರೆ, ಬೇಸಿಗೆ ಕಾಲದಲ್ಲಿ ಧೂಳುಮಯ ವಾಗಿರುವುದರಿಂದ ದ್ವಿಚಕ್ರ, ರಿಕ್ಷಾ ಸೇರಿ ದಂತೆ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಭರವಸೆ ಮಾತ್ರ
ಕಳೆದ 5-6 ವರ್ಷಗಳಿಂದಲೂ ಜನಪ್ರತಿನಿಧಿಗಳು ಈ ರಸ್ತೆಗೆ ಡಾಮರೀಕರಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎನ್ನುತ್ತಾರೆ. ಆದರೆ ಇದು ಕೇವಲ ಭರವಸೆಯಾಗಿಯೇ ಇದೆ. ಇನ್ನೂ ಈಡೇರುವ ಲಕ್ಷಣ ಮಾತ್ರ ಕಂಡು ಬಂದಿಲ್ಲ. ಶಂಕರನಾರಾಯಣ ಗ್ರಾ.ಪಂ., ಪ್ರತಿ ಗ್ರಾಮಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next