Advertisement

ವರ್ಷ ಒಂದು ಕಳೆದರೂ ರಸ್ತೆ ಕಾಮಗಾರಿ ಅಪೂರ್ಣ: ಸಾರ್ವಜಕರಿಂದ ಹಿಡಿಶಾಪ

03:08 PM Oct 05, 2020 | sudhir |

ಅಡಹಳ್ಳಿ: ಅಥಣಿ ತಾಲೂಕಿನ ಕೊಕಟನೂರ-ಕೊಡಗಾನೂರ ಗ್ರಾಮ ಹಾಗೂ ಯಲ್ಲಮ್ಮನವಾಡಿ-ಐಗಳಿ ಕ್ರಾಸ್‌ ರಸ್ತೆ ಡಾಂಬರಿಕರಣ ಹಾಗೂ ದುರಸ್ತಿಗಾಗಿ ಅಡಿಗಲ್ಲಾಗಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣವಾಗದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಕಳೆದ ವರ್ಷ 2019-20ರಲ್ಲಿ ಈ ಎರಡು ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಹು ದಿನಗಳ ಬೇಡಿಕೆಯಾಗಿದ್ದ ಈ ರಸ್ತೆಗಳ ನಿರ್ಮಾಣ ಸುದ್ದಿ ಕೇಳಿ ಈ ಭಾಗದ ರೈತರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಸಂತೋಷಗೊಂಡಿದ್ದರು, ಆದರೆ ವರ್ಷ ಕಳೆದರೂ ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಕಾರಣ ಈಗ ಕೆಸರುಗದ್ದೆಯಂತಾಗಿರುವ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರ ಗತಿ ಅಧೋಗತಿಯಾಗಿದೆ.

ಕೆ,ಆರ್‌,ಐ,ಡಿ,ಎಲ್‌ ಮೇಲೆ ಜನ ಗರಂ: ಯಲ್ಲಮ್ಮನವಾಡಿಯಿಂದ ಐಗಳಿ ಕ್ರಾಸ್‌ವರೆಗಿನ 2.3 ಕಿ.ಮೀ ರಸ್ತೆಗೆ 98.44 ಲಕ್ಷ ಮೊತ್ತದಲ್ಲಿ ಹಾಗೂ ಕೊಕಟನೂರದಿಂದ ಕೊಡಗಾನೂರ ಗ್ರಾಮದವರೆಗೆ 3.25 ಕಿ.ಮೀ ರಸ್ತೆಗೆ 1.26 ಕೋಟಿ ಮೊತ್ತದಲ್ಲಿ ಕರ್ನಾಟಕ ಗ್ರಾಮಾಭಿವೃದ್ಧಿ ನಿಗಮ (ಕೆ,ಆರ್‌,ಐ,ಡಿ,ಎಲ್‌-ಹಿಂದಿನ ಭೂಸೇನಾ ನಿಗಮ) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇಲ್ಲಿಯವರೆಗೆ ಮುರಂ ಹಾಕಿ ಕೈಬಿಡಲಾಗಿದ್ದು, ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಮಳೆ ಸುರಿದು ರಸ್ತೆಯೆಲ್ಲ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಇದನ್ನೂ ಓದಿ:ಉಪಚುನಾವಣೆ ಹೊಸ್ತಿಲಲ್ಲಿ ಸಿಬಿಐ ದಾಳಿ: ರಾಜಕೀಯ ಚದುರಂಗದಾಟದಲ್ಲಿ ಲಾಭ ಯಾರಿಗೆ?

ಈ ರಸ್ತೆ ಮೇಲೆ ಸಂಚರಿಸುವ ದ್ವಿಚಕ್ರವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಇಲ್ಲಿಯ ಜನರ ಒತ್ತಾಯದ ಮೇರೆಗೆ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಆ ಎರಡು ಕಾಮಗಾರಿಗಳಿಗೆ ಮಂಜೂರಾತಿ ಈಗ ದೊರೆತಿದ್ದು, ಮಳೆಗಾಲ ಇರುವುದರಿಂದ ಡಾಂಬರೀಕರಣ ಮಾಡಿಲ್ಲ. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಪ್ರಾರಂಭಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
– ಎ.ಜಿ. ಷಣ್ಮುಗಪ್ಪ, ಸಹಾಯಕ ನಿರ್ದೇಶಕರು, ಕೆಆರ್‌ಐಡಿಎಲ್‌-ಅಥಣಿ

Advertisement

Udayavani is now on Telegram. Click here to join our channel and stay updated with the latest news.

Next