Advertisement

ಸಡಿಲಗೊಳ್ಳದ ಲಾಕ್ ಡೌನ್: ಮತ್ತೆ ಬಿಕೊ ಎನ್ನುತ್ತಿರುವ ರಾಯಚೂರು

02:25 PM May 19, 2020 | keerthan |

ರಾಯಚೂರು: ರಾಜ್ಯದೆಲ್ಲೆಡೆ ನಿಷೇಧಾಜ್ಞೆ ಸಡಿಲಗೊಂಡರೆ ರಾಯಚೂರಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದ್ದು, ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೊ ಎನ್ನುತ್ತಿವೆ.

Advertisement

ಇಷ್ಟು ದಿನ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ರವಿವಾರ ಆರು ಕೋವಿಡ್-19 ಪಾಸಿಟಿವ್ ಬಂದಿವೆ. ಮಹಾರಾಷ್ಟ್ರದಿಂದ ವಲಸಿಗರು ಮರಳಿದ್ದು ಅವರಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಮತ್ತೆ ಲಾಕ್ ಡೌನ್ ಜಾರಿ ಮಾಡಿದ್ದಾರೆ.

ಆದರೆ ಇದರ ಬಗ್ಗೆ ಮಾಹಿತಿ ಇಲ್ಲದೆ ಗ್ರಾಮೀಣ ಭಾಗದಿಂದ ತರಕಾರಿ ಬೆಳೆಗಾರರು ಬೆಳ್ಳಂಬೆಳಗ್ಗೆ ನಗರಕ್ಕೆ ಬಂದಿದ್ದು ಜನರಿಲ್ಲದ್ದನ್ನು ಕಂಡು ಕಂಗಾಲಾಗಿದ್ದಾರೆ. ಖಾಲಿ ರಸ್ತೆಯಲ್ಲಿ ಕುಲಿತು ಜನರಿಗಾಗಿ ಕಾಯುತ್ತಿದ್ದರು

Advertisement

Udayavani is now on Telegram. Click here to join our channel and stay updated with the latest news.

Next