Advertisement

ಹಿಂದೂ ರಾಷ್ಟ್ರ ಮಾಡಲು ಸಂಚು ಅಗತ್ಯವಿಲ್ಲ:ಸಿ.ಟಿ.ರವಿ

02:09 AM Apr 04, 2019 | Sriram |

ಬೆಂಗಳೂರು : ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಸಂಚು ಮಾಡಬೇಕೆಂದಿಲ್ಲ. ಇಲ್ಲಿ ಬಹುಸಂಖ್ಯಾತರು ಹಿಂದೂಗಳೇ ಇರುವುದರಿಂದ ಇದು ಹಿಂದೂ ರಾಷ್ಟ್ರವೇ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್‌ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಾವಿದನ್ನು ತಡೆದು, ಜಾತ್ಯಾತೀತ ರಾಷ್ಟ್ರ ಮಾಡಬೇಕು ಎಂದು ಎಚ್‌.ಡಿ.ದೇವೇಗೌಡರು ಹೇಳಿಕೆ ನೀಡಿದ್ದಾರೆ. ಆದರೆ, ನಾವ್ಯಾಕೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು. ಇಲ್ಲಿ ಶೇ.80ಕಕ್ಕಿಂತಲು ಹೆಚ್ಚು ಹಿಂದುಗಳಿದ್ದಾರೆ. ಇದು ಹುಂದು ರಾಷ್ಟ್ರವೇ ಆಗಿದೆ. ಹೀಗಾಗಿ ಹಿಂದು ರಾಷ್ಟ್ರವಾಗಿ ಮಾಡಲು ಬಿಜೆಪಿಗರು ಸಂಚು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ದೇವೇಗೌಡರು ಒಂದೊಂದು ಬೀದಿಗೆ ಹೋದಾಗ ಅಲ್ಲಿ ಯಾವ ಸಮುದಾಯದವರಿದ್ದಾರೆ ಎಂಬುದನ್ನು ನೋಡಿಕೊಂಡು ಮಾತನಾಡುತ್ತಾರೆ. ಒಂದು ಬೀದಿಯಲ್ಲಿ ಶಿವನ ನೆನಪು, ಇನ್ನೊಂದು ಬೀದಿಯಲ್ಲಿ ಬೇರೆ ಧರ್ಮದ ದೇವರು ನೆನಪಾಗುತ್ತಾರೆ. ಭಾರತವನ್ನು ದುರ್ಬಲಗೊಳಿಸುವವರ ಜತೆ ಸೇರಿಕೊಂಡು ಹೀಗೆಲ್ಲಾ ಮಾತಾಡುತ್ತಿದ್ದಾರೆ. ದೇಶ ವಿಭಜನೆ ಹೇಗಾಯಿತು ಎಂಬುದಕ್ಕೆ ಉತ್ತರ ನೀಡುತ್ತಿರಾ ಎಂದು ಪ್ರಶ್ನಿಸಿದರು.

ಚುನಾವಣಾ ರಾಜಕೀಯ
ಮೈತ್ರಿ ಸರ್ಕಾರ ಚುನಾವಣಾ ರಾಜಕೀಯಕ್ಕಾಗಿ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲಿದ್ದ 142 ಪ್ರಕರಣವನ್ನು ವಜಾ ಮಾಡಿದೆ. ದೇಶ ವಿರೋಧ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲಿದ್ದ ಪ್ರಕರಣವನ್ನು ರದ್ದು ಮಾಡಿದ್ದು ಇನ್ನಷ್ಟು ಆಘಾತ ಸೃಷ್ಟಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next