Advertisement

ಮೈತ್ರಿ ಸರಕಾರದ ಒಮ್ಮತದ ಬಗ್ಗೆ ಸಂದೇಹ ಬೇಡ: ಡಾ. ಪರಮೇಶ್ವರ್‌

07:13 PM Oct 17, 2018 | udayavani editorial |

ಬೆಂಗಳೂರು : ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣಾ ಕಣಕ್ಕೆ ಕಾಂಗ್ರೆಸ್‌ – ಜೆಡಿಎಸ್‌ ಇಳಿಸಿರುವ ಅಭ್ಯರ್ಥಿಗಳಿಗೆ ಎರಡೂ ಪಕ್ಷಗಳ ಪೂರ್ಣ ಬೆಂಬಲವಿದ್ದು  ಮೈತ್ರಿ ಕೂಟದ ಒಮ್ಮತವನ್ನು ಯಾರೂ ಪ್ರಶ್ನಿಸಬೇಕಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ. 

Advertisement

ನಮ್ಮ ಒಮ್ಮತದ ಬಗ್ಗೆ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರ ವಿಶ್ಲೇಷಣೆ ನಮಗೆ ಬೇಕಾಗಿಲ್ಲ ಎಂದು ಇಂದಿಲ್ಲಿ ವಿಧಾನಸೌಧದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಐದೂ ಉಪ ಚುನಾವಣೆಗಳಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲ್ಲುವ ಭರವಸೆ ನಮಗಿದೆ; ಅಂತೆಯೇ ಬಿಜೆಪಿಗೆ ಮುಖಭಂಗವಾಗಲಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next