Advertisement

ಕನ್ನಡ ಭಾಷೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ : ಗೋವಿಂದ ಕಾರಜೋಳ

09:36 AM Sep 16, 2019 | keerthan |

ಬಾಗಲಕೋಟೆ: ಒಂದೇ ಭಾಷೆ ಒಂದೇ ದೇಶ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ 2500 ವರ್ಷಗಳಷ್ಟು ಹಳೆಯ ಭಾಷೆ. ಈ ದೇಶದಲ್ಲಿ ಮುಸ್ಲಿಮರು,ಪೋರ್ಚುಗೀಸರು ಮತ್ತು ಬ್ರಿಟೀಷರು ಆಡಳಿತ ಮಾಡಿದ್ದಾರೆ. ಯಾರು ಬಂದರೂ ಕನ್ನಡ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

Advertisement

ಕನ್ನಡ ಇದ್ದೇ ಇರುತ್ತದೆ. ಈ ಭೂಮಿ ಮೇಲೆ‌ ಜನ ಇರುವವರೆಗೂ ಕನ್ನಡ ಇರುತ್ತದೆ ಎಂದು ಗೋವಿಂದ ಕಾರಜೋಳ ಅಭಿಪ್ರಾಯ ಪಟ್ಟರು.

ಕಾಂಗ್ರೆಸ್, ಬಿಜೆಪಿ ಸೇರಿ ಪ್ರಾದೇಶಿಕ ಪಕ್ಷ ಮುಗಿಸುತ್ತಿವೆ ಎಂಬ ಆರೋಪಕ್ಕೆ ಉತ್ತರ ನೀಡಿದ ಕಾರಜೋಳ, ಯಾವುದೇ ಪ್ರಾದೇಶಿಕ ಪಕ್ಷವನ್ನು ಫಿನಿಶ್ ಮಾಡುವ ಕಾರ್ಯಕ್ರಮ ನಮ್ಮ ಪಕ್ಷದ ಮುಂದಿಲ್ಲ. ನಾವು ಆ ಕೆಲಸ ಮಾಡೋದಿಲ್ಲ. ಚೆನ್ನಾಗಿ ಕೆಲಸ ಮಾಡಿದರೆ ಪ್ರಾದೇಶಿಕ ಪಕ್ಷಗಳು ಉಳಿಯುತ್ತವೆ. ಇಲ್ಲದಿದ್ದರೆ ಉಳಿಯೋದಿಲ್ಲ ಎಂದು ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next