Advertisement

ದ.ಕ.: ಕೋವಿಡ್ ಹೊಸ ಪ್ರಕರಣ ಇಲ್ಲ ; ಕಾಸರಗೋಡು: 3 ಮಂದಿಗೆ ಸೋಂಕು

06:26 AM May 27, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಕೋವಿಡ್ ಪ್ರಕರಣ ದೃಢಪಟ್ಟಿಲ್ಲ.

Advertisement

ಆದರೆ ಕತಾರ್‌ನಿಂದ ಆಗಮಿಸಿದ ಮೂಲತಃ ದ.ಕ. ಜಿಲ್ಲೆಯವರಾದ ಮೂವರಿಗೆ ಬೆಂಗಳೂರಿನಲ್ಲಿ ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ 417 ಮಂದಿಯ ಗಂಟಲು ದ್ರವ ಮಾದರಿ ಸ್ವೀಕೃತವಾಗಿದ್ದು, ಎಲ್ಲವೂ ನೆಗೆಟಿವ್‌ ಆಗಿವೆೆ. 505 ಮಂದಿಯ ಗಂಟಲ ದ್ರವ ಮಾದರಿಯನ್ನು ಹೊಸದಾಗಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 698 ವರದಿಗಳು ಬರಲು ಬಾಕಿ ಇವೆ.

7 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಹಾಗೂ 8 ಮಂದಿ ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗಾಗಿ ಹೊಸದಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 23 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. 47 ಮಂದಿ ಎನ್‌ಐಟಿಕೆಯಲ್ಲಿ, 27 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.

ಕತಾರ್‌ನಿಂದ ಬಂದವರಿಗೆ ಕೋವಿಡ್
ಕತಾರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಮೂವರು ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿ ತಪಾಸಣೆ ವೇಳೆ ಕೋವಿಡ್ ಪತ್ತೆಯಾಗಿದ್ದು, ಅವರನ್ನು ಬೆಂಗಳೂರಿನಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ. 30 ವರ್ಷದ ಇಬ್ಬರು ಮತ್ತು 37 ವರ್ಷದ ಓರ್ವ ಕೋವಿಡ್ ದೃಢಪಟ್ಟವರು. ಮೂವರೂ ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು.

Advertisement

ಕಾಸರಗೋಡು: 3 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಮೂವರ ಸಹಿತ ಕೇರಳದಲ್ಲಿ ಮಂಗಳವಾರ ಒಂದೇ ದಿನ 67 ಕೋವಿಡ್ ಪ್ರಕರಣಗಳು ದೃಢಗೊಂಡಿದ್ದು 10 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಇಬ್ಬರು ಗುಣಮುಖ
ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಸೋಂಕು ಖಚಿತಗೊಂಡಿದೆ. ಇಬ್ಬರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ ಮಧೂರು ನಿವಾಸಿಗಳಾದ 28 ವರ್ಷದ ಪುರುಷ, 25 ವರ್ಷದ ಮಹಿಳೆ, ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಮಡಿಕೈ ನಿವಾಸಿಗೂ ರೋಗ ಖಚಿತವಾಗಿದೆ.

ಉಲ್ಲಂಘನೆ: ಬಂಧನ
ಲಾಕ್‌ಡೌನ್‌ ಉಲ್ಲಂಘಿಸಿ ಕಾರಿನಲ್ಲಿ ಸುತ್ತಾಡುತ್ತಿದ್ದ ಪತ್ವಾಡಿ ನಿವಾಸಿ ಮೊಹಮ್ಮದ್‌ ಶಮೀರ್‌ ನನ್ನು(40) ಮಂಜೇಶ್ವರ ಪೊಲೀಸರು ಬಂಧಿಸಿ ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ. ಆಂಧ್ರದಿಂದ ಮರಳಿದ ಈತ ಕ್ವಾರಂಟೈನ್‌ನಲ್ಲಿರದೆ ಸುತ್ತಾಡುತ್ತಿದ್ದ ಕಾರಣ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next