Advertisement

ನೆಟ್‌ ಅಭ್ಯಾಸ ಅಗತ್ಯವಿಲ್ಲ: ರವಿಶಾಸ್ತ್ರಿ

06:00 AM Dec 11, 2018 | Team Udayavani |

ಅಡಿಲೇಡ್‌: ನೆಟ್‌ ಅಭ್ಯಾಸ ಹಾಳಾಗಿ ಹೋಗಲಿ, ಇದು ಅಗತ್ಯವಿಲ್ಲ. ಆಟಗಾರರಿಗೆ ಅಗತ್ಯ ವಾಗಿ ಬೇಕಿರುವುದು ವಿಶ್ರಾಂತಿ ಎಂದು ಮೊದಲ ಟೆಸ್ಟ್‌ನಲ್ಲಿ 31 ರನ್ನುಗಳ ಗೆಲುವು ದಾಖಲಿಸಿದ ಬಳಿಕ ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಒತ್ತಿ ಹೇಳಿದರು.

Advertisement

ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧ ಬೆನ್ನು ಬೆನ್ನಿಗೆ ಸೋಲನ್ನು ಕಂಡ ಬಳಿಕ ಭಾರತವು ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿಯೇ ಗೆಲುವು ಸಾಧಿಸಿ ಶುಭಾರಂಭಗೈದಿದೆ. ಏಳು ದಶಕಗಳ ಬಳಿಕ ಭಾರತ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ಸಾಧನೆ ಮಾಡಿದೆ. ನಾವು ಇಂಗ್ಲೆಂಡ್‌ನ‌ಲ್ಲಿ 31 ರನ್ನಿನಿಂದ ಮೊದಲ ಟೆಸ್ಟ್‌ ಸೋತಿದ್ದೆವು. ದಕ್ಷಿಣ ಆಫ್ರಿಕಾದಲ್ಲಿ 60-70 ರನ್ನಿನಿಂದ ಸೋತಿದ್ದೆವು. ಆದರೆ ಇಲ್ಲಿ ಗೆದ್ದಿರುವುದು ನಮ್ಮ ಆಟಗಾರರಿಗೆ ಒಳ್ಳೆಯ ಅನುಭವ. ಎಂದು ಶಾಸ್ತ್ರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next