Advertisement

ಲಂಕಾ ತುರ್ತು ಪರಿಸ್ಥಿತಿ ಮುಂದುವರಿಕೆ ಇಲ್ಲ: ಕಾನೂನು ಸಚಿವ

03:14 PM Mar 13, 2018 | Team Udayavani |

ಕೊಲಂಬೋ : ದೇಶದಲ್ಲಿ ಹೇರಲಾಗಿದ್ದ ಹತ್ತು ದಿನಗಳ ತುರ್ತು ಪರಿಸ್ಥಿತಿಯನ್ನು ಮುಂದುವರಿಸುವುದಿಲ್ಲ ಎಂದು ಲಂಕೆಯ ಕಾನೂನು ಮತ್ತು ಸುವ್ಯವಸ್ಥೆ ಸಚಿವರು ಹೇಳಿದ್ದಾರೆ.

Advertisement

ಕ್ಯಾಂಡಿ ಜಿಲ್ಲೆಯಲ್ಲಿ ಸ್ಫೋಟಗೊಂಡಿದ್ದ ಕೋಮು ಗಲಭೆ, ಹಿಂಸೆಯನ್ನು ತಹಬಂದಿಗೆ ತರಲು ದೇಶಾದ್ಯಂತ ಹೇರಲಾಗಿದ್ದ  ಹತ್ತು ದಿನಗಳ ತುರ್ತು ಪರಿಸ್ಥಿತಿ ಇದೇ ಮಾರ್ಚ್‌ 15ರಂದು ಕೊನೆಗೊಳ್ಳುತ್ತದೆ. ಇದನ್ನು ಪುನಃ ವಿಸ್ತರಿಸುವ ಅಗತ್ಯವಿಲ್ಲ ಎಂದು ಸಚಿವ ರಂಜಿತ್‌ ಮದ್ದುಮಬಂದ್ರ ಹೇಳಿದರು. 

ಸಿಂಹಳೀಯ ಬೌದ್ಧರು ಮತ್ತು ಮುಸ್ಲಿಮರ ನಡುವೆ ನಡೆದಿದ್ದ ಕೋಮು ಸಂಘರ್ಷದಲ್ಲಿ ಇಬ್ಬರು ಮಡಿದಿದ್ದರು. ಹಲವಾರು ಮನೆ, ಅಂಗಡಿ, ಮಸೀದಿಗಳು ಹಾನಿಗೀಡಾಗಿದ್ದವು. 

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಕ್ಯಾಂಡಿ ಕೋಮು ಗಲಭೆಯ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next