Advertisement

ಇನ್ನು ವೃದ್ಧಾಪ್ಯ ವೇತನಕ್ಕೆ ಅರ್ಜಿ ಬೇಡ: ಅಶೋಕ್‌

11:04 PM Dec 08, 2019 | Lakshmi GovindaRaj |

ಹೆಬ್ರಿ: ಇನ್ನು ಮುಂದೆ ವೃದ್ಧಾಪ್ಯವೇತನ ಪಡೆಯಲು ತಾಲೂಕು ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಸರಕಾರವೇ ದಾಖಲೆಗಳನ್ನು ಪರಿಶೀಲಿಸಿ ಅರ್ಹರ ಮನೆಬಾಗಿಲಿಗೆ ಬಂದು ವೃದ್ಧಾಪ್ಯ ವೇತನ ಮತ್ತಿತರ ಮಾಸಾಶನಗಳನ್ನು ನೀಡಲಿದೆ. ಈ ಯೋಜನೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡು ನಂತರ ರಾಜ್ಯವ್ಯಾಪಿಯಾಗಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ಭಾನುವಾರ ಅವರು 10 ಕೋಟಿ ರೂ.ವೆಚ್ಚದ ಹೆಬ್ರಿ ತಾಲೂಕು ಮಿನಿ ವಿಧಾನಸೌಧ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next