Advertisement

ಸಮಾನ ನಾಗರಿಕ ಸಂಹಿತೆ ಬೇಕು: ಹಿಮಾಂತ ಶರ್ಮಾ ಬಿಸ್ವಾ

09:29 PM May 01, 2022 | Team Udayavani |

ಗುವಾಹಟಿ:”ಮುಸ್ಲಿಂ ಸಮುದಾಯದ ಮಹಿಳೆ ತನ್ನ ಪತಿ ಮೂವರು ಪತ್ನಿಯರನ್ನು ಹೊಂದಲು ಬಯಸುವುದಿಲ್ಲ. ತ್ರಿವಳಿ ತಲಾಖ್‌ ರದ್ದಾದ ಬಳಿಕ ಆ ಸಮುದಾಯದ ಮಹಿಳೆಯರಿಗೆ ಗೌರವ ನೀಡಬೇಕೆಂದಿದ್ದರೆ, ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು’ ಹೀಗೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮಾ ಬಿಸ್ವಾ ತಿಳಿಸಿದ್ದಾರೆ.

Advertisement

ನವದೆಹಲಿಯಲ್ಲಿ ಮಾತನಾಡಿದ ಅವರು, ತಾವು ಭೇಟಿ ಮಾಡಿದ ಎಲ್ಲಾ ಮುಸ್ಲಿಂ ಸಮುದಾಯದ ಮಹಿಳೆಯರು ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಎಂದರು ಅಸ್ಸಾಂ ಸಿಎಂ.

Advertisement

Udayavani is now on Telegram. Click here to join our channel and stay updated with the latest news.

Next