Advertisement

ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ, ಅತೃಪ್ತ ಶಾಸಕರ ಆರೋಪಕ್ಕೆ ರೇವಣ್ಣ

08:44 AM Jul 18, 2019 | Team Udayavani |

ಬೆಂಗಳೂರು: ಸಿಲಿಕಾನ್ ನಗರದ ಔಟರ್ ರಿಂಗ್ ರೋಡ್, ಎಲಿವೇಟೆಡ್ ರಸ್ತೆ ಹಾಗೂ ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಅತೃಪ್ತ ಶಾಸಕರ ಆರೋಪಕ್ಕೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ಎಲಿವೇಟೆಡ್ ರಸ್ತೆ ವಿಚಾರದಲ್ಲಿ ಶಾಸಕ ಮುನಿರತ್ನ ಒಮ್ಮೆ ನನ್ನ ಭೇಟಿಯಾಗಿ ಮನವಿ ಮಾಡಿದ್ದು ನಿಜ.

ಆದರೆ ನಾನು ಈ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಭೇಟಿಯಾಗಿ ಚರ್ಚಿಸಿ ಎಂದು ಹೇಳಿದ್ದೆ. ಆ ಬಳಿಕ ಅವರು ನನ್ನ ಬಳಿ ಬಂದಿಲ್ಲ. ಇದರಲ್ಲಿ ನನ್ನ ಕೈವಾಡವೇನೂ ಇಲ್ಲ ಎಂದು ತಿಳಿಸಿದ್ದಾರೆ.

ನನ್ನ ಇಲಾಖೆ ಬಿಟ್ಟು ನಾನು ಬೇರೆ ಯಾವ ಇಲಾಖೆಯ ಕೆಲಸದಲ್ಲೂ ಹಸ್ತಕ್ಷೇಪ ಮಾಡಿಲ್ಲ. ವರ್ಗಾವಣೆ ವಿಚಾರದಲ್ಲಿಯೂ ನಾನು ಕೈಹಾಕಿಲ್ಲ ಎಂದು ಅತೃಪ್ತ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next