Advertisement

ಉಚಿತ ಮರಳು  ಪ್ರಸ್ತಾವನೆ ಇಲ್ಲ: ಹಾಲಪ್ಪ ಆಚಾರ್‌

10:52 PM Sep 30, 2021 | Team Udayavani |

ಬೆಂಗಳೂರು: ನೂತನ ಮರಳು ನೀತಿಯಲ್ಲಿ ಉಚಿತವಾಗಿ ಮರಳು ನೀಡುವ ಪ್ರಸ್ತಾವನೆ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತವಾಗಿ ಮರಳು ನೀಡುವುದು ಈಗಿನ ಪರಿಸ್ಥಿತಿಯಲ್ಲಿ  ಸಾಧ್ಯವಿಲ್ಲ ಎಂದು ಹೇಳಿದರು.

ಹಿಂದಿನ ಸಚಿವರು 10 ಲಕ್ಷ ರೂ. ಮೊತ್ತದ ಮನೆ ನಿರ್ಮಿಸುವ ಬಡವರಿಗೆ  ಪ್ರತಿ ಟನ್‌ಗೆ 100 ರೂ. ರಾಯಧನ ಪಡೆದು ಮರಳನ್ನು  ನೀಡುವ ಭರವಸೆ ನೀಡಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ಅಂಥ ಪ್ರಸ್ತಾವನೆ  ಇಲ್ಲ ಎಂದರು.

ರಾಜ್ಯಕ್ಕೆ 45 ಲಕ್ಷ ಮೆಟ್ರಿಕ್‌ ಟನ್‌ ಮರಳು ಅಗತ್ಯವಿದ್ದು, 10 ಲಕ್ಷ ಮೆಟ್ರಿಕ್‌ ಟನ್‌ ಕೊರತೆಯಿದೆ. ಹೀಗಾಗಿ ಎಂ. ಸ್ಯಾಂಡ್‌ಗೆ ಮೊರೆ ಹೋಗುವುದು ಹಾಗೂ ಅದರ ಮೇಲೆ ಅವಲಂಬನೆ ಆಗುವುದು ಅನಿವಾರ್ಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next