Advertisement

ಕುವೈಟ್‌ನಿಂದ ವಿಮಾನವಿಲ್ಲ ; ಆಕ್ಷೇಪ

07:48 AM May 21, 2020 | mahesh |

ಮಂಗಳೂರು: ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರುವ “ವಂದೇ ಭಾರತ್‌’ ಯೋಜನೆಯಲ್ಲಿ ಕುವೈಟ್‌ನಿಂದ ಯಾವುದೇ ವಿಮಾನ ಕರ್ನಾಟಕಕ್ಕೆ ನಿಗದಿ ಆಗಿಲ್ಲ ಎಂದು ಅನಿವಾಸಿ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಕುವೈಟ್‌ ಕನ್ನಡಿಗರಿಗೆ ನೆರವಾಗುವ ನಿಟ್ಟಿನಲ್ಲಿ ವಿಮಾನ ವ್ಯವಸ್ಥೆ ಮಾಡುವ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಭರವಸೆ ನೀಡಿದ್ದರು. ಆದರೆ ಮೇ 17ರಿಂದ ಜೂನ್‌13ರ ವರೆಗಿನ ವಿಮಾನಗಳ ವೇಳಾಪಟ್ಟಿಯಲ್ಲಿ ಕುವೈಟ್‌ನಿಂದ ಕರ್ನಾಟಕಕ್ಕೆ ಸಂಚಾರದ ಉಲ್ಲೇಖವಾಗಿಲ್ಲ ಎಂದು ಆರೋಪಿಸಿದ್ದಾರೆ.

3,000 ಮಂದಿ ನಿರೀಕ್ಷೆಯಲ್ಲಿ: “ಉದಯವಾಣಿ’ ಜತೆಗೆ ಮಾತನಾಡಿದ ಕುವೈಟ್‌ನ ಮೋಹನ್‌ದಾಸ್‌ ಕಾಮತ್‌ ಅವರು, “ಕುವೈಟ್‌ನಲ್ಲಿ ಕರ್ನಾಟಕದ ಸುಮಾರು 50,000 ಜನರು, ಕರಾವಳಿ ಭಾಗದ 35,000 ಜನರು ಇದ್ದಾರೆ. ಈ ಪೈಕಿ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಆರೋಗ್ಯ ತಪಾಸಣೆಗೆ ಬಯಸುವವರು ಸೇರಿದಂತೆ ಸುಮಾರು 3,000ಕ್ಕೂ ಅಧಿಕ ಮಂದಿ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ವಿಮಾನ ಸೇವೆ ದೊರೆಯದೆ ಕಂಗಾಲಾಗಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next