Advertisement

ಸಿದ್ದು ಆಯ್ಕೆ ಕುರಿತು ಭಿನ್ನಾಭಿಪ್ರಾಯ ಇಲ್ಲ: ರಮೇಶ್‌ ಕುಮಾರ್‌

10:15 AM Oct 17, 2019 | Sriram |

ಕೋಲಾರ: ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಬದ್ದ. ಪಕ್ಷಕ್ಕೆ ಅವರ ಆಯ್ಕೆ ಸೂಕ್ತ ಎನಿಸಿರುವುದರಿಂದ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಅತೃಪ್ತಿ ಇಲ್ಲ ಎಂದರು.

ಸಲಹೆಗಾರರನ್ನು ನೇಮಿಸಿಕೊಂಡಿರುವುದು ಸ್ಪೀಕರ್‌ ಅವರ ವಿವೇಚನೆಗೆ ಬಿಟ್ಟ ವಿಷಯ. ವಿಧಾನಮಂಡಲದಲ್ಲಿ ಅನುಭವ ಹೊಂದಿರುವವರ ಸಲಹೆ ಪಡೆಯುವುದು ಸರಿಯಲ್ಲ ಎಂದು ಹೇಗೆ ಹೇಳಲಿ? ಅವರ ಪರ್ಸನಲ್‌ ಸ್ಟಾಪ್‌ ವಿರುದ್ಧ ನಾನು ವ್ಯಾಖ್ಯಾನ ಮಾಡುವುದಿಲ್ಲ.
– ಕೆ.ಆರ್‌.ರಮೇಶ್‌ಕುಮಾರ್‌, ಮಾಜಿ ವಿಧಾನಸಭಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next