Advertisement

ಏಕರೂಪ ನಾಗರಿಕ ಸಂಹಿತೆ ನಿರ್ಧಾರವಿಲ್ಲ

06:00 AM Aug 21, 2018 | Team Udayavani |

ನವದೆಹಲಿ: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಭಾರತೀಯ ಕಾನೂನು ಆಯೋಗವು ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ. ಆ.31ರಿಂದ ಆಯೋಗದ ಮುಖ್ಯಸ್ಥ ಬಿ.ಎಸ್‌.ಚೌಹಾಣ್‌ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಸಾಲದು ಎಂದು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ ಬುಡಕಟ್ಟು ಜನಾಂಗದ ಪ್ರದೇಶಗಳಲ್ಲಿ ವೈಯಕ್ತಿಕ ಕಾನೂನು ರಕ್ಷಣೆಯ ಪ್ರಸ್ತಾಪವನ್ನು ಆರನೇ ಪರಿಚ್ಛೇದದಲ್ಲಿ ಮಾಡಲಾಗಿರುವು ದರಿಂದ, ಅದರ ಬಗ್ಗೆ ನಿರ್ಧಾರ ಕೈಗೊಳ್ಳ ಬೇಕಿರುವ ಅಡ್ಡಿಯೂ ಇದೆ. ಹೀಗಾಗಿ ಆಯೋಗ ಕೇವಲ ಕೆಲವು ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆ.

Advertisement

2016 ಜುಲೈನಲ್ಲಿ ಕಾನೂನು ಸಚಿವಾಲಯ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರು ವುದು ಸಾಧ್ಯವೇ ಎಂಬುದಾಗಿ ಪರಿಶೀಲಿ ಸುವಂತೆ ಆಯೋಗವನ್ನು ಕೇಳಿತ್ತು. ನಂತರ ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಅಭಿಪ್ರಾ ಯವನ್ನೂ ಕೇಳಿತ್ತು. ತ್ರಿವಳಿ ತಲಾಖ್‌, ಮಹಿಳೆಯರಿಗೆ ಸ್ವತ್ತು ಹಕ್ಕು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಶ್ನಾವಳಿ ಪ್ರಕಟಿಸಿ ಇದಕ್ಕೆ ಸಾರ್ವಜನಿಕರು ಉತ್ತರಿಸು ವಂತೆ ಕೋರಿತ್ತು. ಈ ಮಧ್ಯೆಯೇ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಬಿ.ಎಸ್‌.ಚೌಹಾಣ್‌ ಹೇಳಿದ್ದರೂ, ಅಭಿ ಪ್ರಾಯ ಪಡೆಯುವ ಪ್ರಕ್ರಿಯೆ 2018 ಮಾರ್ಚ್‌ವರೆಗೂ ಮುಂದುವರಿದಿತ್ತು. ಈ ಪ್ರತಿಕ್ರಿಯೆ ಆಧರಿಸಿ ಸಲಹೆಗಳು ಮತ್ತು ತಿದ್ದುಪಡಿ ಕರಡುಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಆ.31ರೊಳಗೆ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಈ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಬಹುದಾಗಿದೆ.

ಈ ಹಿಂದೆ, 6ನೇ ಪರಿಚ್ಛೇದದಲ್ಲಿ ವೈಯಕ್ತಿಕ ಕಾನೂನುಗಳಿಗೆ ವಿನಾಯಿತಿ ಇರುವುದರಿಂದ ಏಕರೂಪ ನಾಗರಿಕ ಸಂಹಿತೆಯೇ ಪರಿಹಾರ ವಾಗದು. ಆರನೇ ಪರಿಚ್ಛೇದವನ್ನು ಬದಿಗಿಟ್ಟು ಸಂವಿಧಾನಕ್ಕೆ ತಿದ್ದುಪಡಿ ತರಲಾಗದು ಎಂದು ಚೌಹಾಣ್‌ ತಿಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next