Advertisement

“ಕಲ್ಲಿದ್ದಲು ಕೊರತೆಯೂ ಇಲ್ಲ, ವಿದ್ಯುತ್‌ ಅಭಾವವೂ ಇಲ್ಲ’

02:01 AM Apr 23, 2022 | Team Udayavani |

ಮಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯೂ ಇಲ್ಲ, ವಿದ್ಯುತ್‌ ಅಭಾವವೂ ಇಲ್ಲ, ವಿದ್ಯುತ್‌ ಉತ್ಪಾದನೆಯಲ್ಲಿ ಕಡಿತವಾಗಿಲ್ಲ, ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಕೆ ಆಗುತ್ತಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಮುಂದಿಟ್ಟುಕೊಂಡು ವಿದ್ಯುತ್‌ ಕೊರತೆ ಬಗ್ಗೆ ವಿಪಕ್ಷಗಳು ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಪ್ರತೀ ದಿನ 13ರಿಂದ 15 ರ್ಯಾಕ್‌ ಕಲ್ಲಿದ್ದಲು ಸರಬರಾಜು ಆಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಇದೆ.

ಪ್ರತೀ ದಿನ 14,000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. 14,800 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಇದೆ. ಈ ಬಾರಿ ವಿದ್ಯುತ್‌ ಕೊರತೆಯಾಗದಂತೆ ನಾಲ್ಕು ತಿಂಗಳ ಹಿಂದೆಯೇ ಪೂರ್ವ ಸಿದ್ಧತೆ ಮಾಡಲಾಗಿದೆ. ಪ್ರಸಕ್ತ ನೂರು ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ ಎಂದರು.

ವಿದ್ಯುತ್‌ ಉತ್ಪಾದನೆ ಹೀಗೆಯೇ ಮುಂದುವರಿದರೆ, ಮುಂದಿನ ದಿನ ಗಳಲ್ಲಿ ಬೇರೆ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡುವ ಶಕ್ತಿ ಬರ ಬಹುದು. ಈ ಕುರಿತಂತೆ ಕೇಂದ್ರ ಸರಕಾರದ ಜತೆ ನಿರಂತರ ಸಂಪರ್ಕ ಇರಿಸಲಾಗಿದೆ ಎಂದರು.

ಪ್ರಧಾನಮಂತ್ರಿ ಕುಸುಮ್‌ ಯೋಜನೆಯಡಿ ಒಂದು ಐಪಿ ಸೆಟ್‌ಗೆ ಸೋಲಾರ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ನೇರ ವಾಗಿ ಐಪಿ ಸೆಟ್‌ಗೆ ಸೋಲಾರ್‌ ಅಳವಡಿಸುವುದಲ್ಲ, ಫೀಡರ್‌ಗೆ ಸೋಲಾರ್‌ ಹಾಕಲಾಗುತ್ತದೆ. ಇದ ರಿಂದ ಸುಮಾರು 2 ಲಕ್ಷ ರೈತರಿಗೆ 960ಮೆಗಾವ್ಯಾಟ್‌ ವಿದ್ಯುತ್‌ ಉಳಿತಾ ಯವಾಗಲಿದೆ.

Advertisement

ಬೆಸ್ಕಾಂ ಮತ್ತು ಎಸ್ಕಾಂಗಳಲ್ಲಿ ಸೋಲಾರ್‌ ಅಳವಡಿಕೆಗೆ ಕ್ರಮ ಕೈಗೊಳ್ಳ‌ಲಾಗುವುದು. ಕೃಷಿಗೆ ಹಗಲು ನಿರಂತರ ವಿದ್ಯುತ್‌ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳ‌ಲಾಗಿದೆ ಎಂದರು..

Advertisement

Udayavani is now on Telegram. Click here to join our channel and stay updated with the latest news.

Next