Advertisement

ಚುನಾವಣೋತ್ತರ ತೃತೀಯ ರಂಗ ರಚನೆ ಸಾಧ್ಯತೆ ಇಲ್ಲ : ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌

09:47 AM May 15, 2019 | Team Udayavani |

ಚೆನ್ನೈ : 2019ರ ಲೋಕಸಭಾ ಚುನಾವಣೋತ್ತರದಲ್ಲಿ ಬಿಜೆಪಿಯೇತರ, ಕಾಂಗ್ರೆಸೇತರ ತೃತೀಯ ರಂಗ ರಚನೆಯ ಸಾಧ್ಯತೆ ಇಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಹೇಳಿದ್ದಾರೆ; ಆದರೆ ಮೇ 23ರಂದು ನಡೆಯುವ ಮತ ಎಣಿಕೆಯ ಬಳಿಕದಲ್ಲಿ ಈ ಕುರಿತ ಒಂದು ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಎಂದವರು ಹೇಳಿದರು.

Advertisement

2019ರ ಲೋಕಸಭಾ ಚುನಾವಣೆಯ ಬಳಿಕದಲ್ಲಿ ಕೇಂದ್ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಹೊರತಾದ ತೃತೀಯ ರಂಗದ ಸರಕಾರವನ್ನು ಅಸ್ತಿತ್ವಕ್ಕೆ ತರುವ ದಿಶೆಯಲ್ಲಿ ಟಿಆರ್‌ಎಸ್‌ ಮುಖ್ಯಸ್ಥ ಮತ್ತು ತೆಲಂಗಾಣ ಸಿಎಂ ಆಗಿರುವ ಕೆ ಚಂದ್ರಶೇಖರ್‌ ರಾವ್‌ ಅವರು ಸ್ಟಾಲಿನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಒಂದು ದಿನದ ತರುವಾಯ ಸ್ಟಾಲಿನ್‌ ಈ ಹೇಳಿಕೆ ನೀಡಿದ್ದಾರೆ.

ರಾವ್‌ ಅವರು ಚುನಾವಣೋತ್ತರ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಈ ಮೊದಲು ಭೇಟಿ ನೀಡಿಲ್ಲ ಎಂದು ತಮಿಳು ನಾಡು ವಿರೋಧ ಪಕ್ಷ ನಾಯಕನಾಗಿರುವ ಸ್ಟಾಲಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next