Advertisement

ಶ್ರೀಮಂತ ಪಾಟೀಲ್‌ ಭೇಟಿಗೆ ಪೊಲೀಸರಿಗೆ ಅವಕಾಶ ಸಿಕ್ಕಿಲ್ಲ: ಎಂಬಿಪಿ

12:12 AM Jul 20, 2019 | Lakshmi GovindaRaj |

ವಿಧಾನಸಭೆ: ಕಾಗವಾಡದ ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್‌ರನ್ನು ಭೇಟಿ ಮಾಡಲು ಮುಂಬೈ ಆಸ್ಪತ್ರೆಯಲ್ಲಿ ರಾಜ್ಯದ ಪೊಲೀಸರಿಗೆ ಅವಕಾಶ ನೀಡಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಸದನಕ್ಕೆ ಮಾಹಿತಿ ನೀಡಿದರು.

Advertisement

ಶ್ರೀಮಂತ ಪಾಟೀಲ್‌ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾಹಿತಿ ನೀಡುವಂತೆ ಸ್ಪೀಕರ್‌ ನೀಡಿದ ಸೂಚನೆ ಮೇರೆಗೆ ಎಂ.ಬಿ. ಪಾಟೀಲ್‌ ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದರು.

ಶ್ರೀಮಂತ ಪಾಟೀಲ್‌ ಅವರ ಸಾಂಗ್ಲಿಯಲ್ಲಿರುವ ಮನೆಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಮುಂಬೈನಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಮುಂಬೈಗೆ ತೆರಳಿ ಅವರಿಂದ ವಿವರಣೆ ಪಡೆಯಲು ಯತ್ನಿಸಿದರು. ಆದರೆ, ಅವರು ದಾಖಲಾಗಿರುವ ಆಸ್ಪತ್ರೆಯವರು ಭೇಟಿಗೆ ಅವಕಾಶ ಕಲ್ಪಿಸಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next