Advertisement

ಪ್ರಮಾಣಪತ್ರ ಬೇಕಿಲ್ಲ;ರಾಜಶೇಖರ ಪಾಟೀಲ

01:57 AM Jul 05, 2019 | Team Udayavani |
ಬಾಗಲಕೋಟೆ: ಸಮನ್ವಯ ಸಮಿತಿ ಅಧ್ಯಕ್ಷರಾಗಲು ಸಿದ್ದರಾಮಯ್ಯ ಯೋಗ್ಯರಲ್ಲ ಎಂಬ ಜೆಡಿಎಸ್‌ನ ಎಚ್.ವಿಶ್ವನಾಥ ಹೇಳಿಕೆಗೆ ತಿರುಗೇಟು ನೀಡಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಐದು ವರ್ಷ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಸಿದ್ದರಾಮಯ್ಯಗೆ ವಿಶ್ವನಾಥ್‌ ಅವರ ಪ್ರಮಾಣಪತ್ರ ಬೇಕಾಗಿಲ್ಲ ಎಂದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ರಾಜ್ಯದ ಜನರೇ ಉತ್ತಮ ಸಿಎಂ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಜೆಡಿಎಸ್‌ನ ವಿಶ್ವನಾಥ್‌ ಅವರಿಂದ ಸಿದ್ದುಗೆ ಯಾವ ಪ್ರಮಾಣಪತ್ರವೂ ಬೇಡ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next