Advertisement

ಗಮನಿಸಿ: ಧಾರಾಕಾರ ಮಳೆಗೆ ರಾಮದುರ್ಗಕ್ಕೆ ಬಸ್ ಸಂಚಾರ ಬಂದ್

09:50 AM Oct 22, 2019 | keerthan |

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ‌ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಮದುರ್ಗಕ್ಕೆ ಹೋಗುವ ಎಲ್ಲ ಮಾರ್ಗಗಳ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ತಡೆ ಹಿಡಿಯಲಾಗಿದೆ.

Advertisement

ಜಿಲ್ಲೆಯಲ್ಲಿ ಈಗ ಮತ್ತೊಮ್ಮೆ‌ಪ್ರವಾಹ ಸ್ಥಿತಿ ಎದುರಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಮೂರು ದಿನಗಳ ಸತತ ಮಳೆ ಆಗುವ ಬಗ್ಗೆ ಹವಾಮಾನ‌ ಇಲಾಖೆ‌ ಮುನ್ಸೂಚನೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಮಳೆ‌ ಆಗುತ್ತಿರುವುದರಿಂದ ರಾಮದುರ್ಗಕ್ಕೆ‌ ಸಾಗುವ ವಾಹನಗಳನ್ನು ಬಂದ್ ಮಾಡಲಾಗಿದೆ.

ಬೆಳಗಾವಿಯಿಂದ ರಾಮದುರ್ಗ, ರಾಮದುರ್ಗದಿಂದ ಕೊಣ್ಣೂರ, ರಾಮದುರ್ಗದಿಂದ ಕಟಕೋಳ, ಕಟಕೋಳದಿಂದ ಮುನವಳ್ಳಿ, ರಾಮದುರ್ಗದಿಂದ ಮೂಲಂಗಿ, ಸುರೇಬಾನದಿಂದ ಕುಳಗೇರಿಗೆ ಸಾಗುವ ಎಲ್ಲ‌ ಮಾರ್ಗಗಳ ಬಸ್ ಸಂಚಾರವನ್ನು ಬಂದ್ ಮಾಡಿರುವುದಾಗಿ ವಿಭಾಗೀಯ ನಿಯಂತ್ರಾಧಿಕಾರಿ ಎಂ.ಆರ್. ಮುಂಜಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next