Advertisement

ಬ್ಯಾಂಕ್‌ಗಳ ವಿಲೀನದಿಂದ ಲಾಭವಿಲ್ಲ: ಸಿದ್ದರಾಮಯ್ಯ

11:38 PM Aug 31, 2019 | Lakshmi GovindaRaj |

ಮಂಗಳೂರು: ಬ್ಯಾಂಕ್‌ಗಳ ವಿಲೀನ ಮಾಡಿ ಅವುಗಳನ್ನು ಬಲಪಡಿಸುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ವಿಲೀನದಿಂದ ಬ್ಯಾಂಕ್‌ಗಳು ಬಲಗೊಳ್ಳುತ್ತವೆ ಎಂದು ತಮಗೆ ಅನ್ನಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಿಸರ್ವ್‌ ಬ್ಯಾಂಕ್‌ ಸೇರಿ ಎಲ್ಲ ಬ್ಯಾಂಕ್‌ಗಳ ಮೇಲೆ ಕೇಂದ್ರದ ಹಸ್ತಕ್ಷೇಪ ಜಾಸ್ತಿಯಾಗಿದೆ.

Advertisement

ದೇಶದಲ್ಲಿ ಆರ್ಥಿಕ ವ್ಯವಸ್ಥೆ ದುರ್ಬಲವಾಗಿದೆ. ಜಿಡಿಪಿ ಬೆಳವಣಿಗೆ ದರ ಶೇ. 5ರಷ್ಟು ಏರಿಕೆ ಅನ್ನುತ್ತಾರೆ. ಕಳೆದ 6 ವರ್ಷಗಳಲ್ಲಿ ಇದೇ ಅತ್ಯಂತ ಕಡಿಮೆ ಅಂತಾನೂ ಅವರೇ ಹೇಳಿದ್ದಾರೆ. ಆದರೆ, ನನ್ನ ಪ್ರಕಾರ ಇದು ಶೇ.5ರಷ್ಟು ಅಲ್ಲ. ಕೇವಲ 3.7 ಅಥವಾ ಶೇ.4ರಷ್ಟು ಆಗಿರಬೇಕು. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಶೇ.8-9 ಜಿಡಿಪಿ ಇತ್ತು. ಸದ್ಯ ಜಿಡಿಪಿ ಕುಸಿತಕ್ಕೆ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಯೇ ಕಾರಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next