Advertisement

ನೋಟು ರದ್ದತಿ ಟೀಕಿಸಬಾರದಿತ್ತು!

09:35 AM Mar 13, 2017 | |

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಗೆಲುವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನೋಟುಗಳ ಅಪನಗದೀಕರಣಕ್ಕೆ ಲಿಂಕ್‌ ಮಾಡಿದ್ದಾರೆ.

Advertisement

ಪಂಚರಾಜ್ಯಗಳಲ್ಲಿ ಚುನಾವಣೆ ಗೆದ್ದ ಎಲ್ಲ ಪಕ್ಷಗಳಿಗೂ ಆನ್‌ಲೈನ್‌ನಲ್ಲಿ ಸಂದೇಶ ರವಾನಿಸಿರುವ ನಿತೀಶ್‌, “ನೋಟು ಅಮಾನ್ಯ ದಂತಹ ಕ್ರಮವನ್ನು ನೀವು(ಪ್ರತಿಪಕ್ಷಗಳು) ಅಷ್ಟೊಂದು ದೊಡ್ಡದಾಗಿ ಟೀಕಿಸಬಾರದಿತ್ತು.

ಅಪನಗದೀಕರಣವು ಶ್ರೀಮಂತರ ಮೇಲೆ ಪ್ರಯೋಗಿಸಿದ ಅಸOಉ ಎಂದೇ ಬಡವರು ತಿಳಿದುಕೊಂಡರು. ಹಾಗಾಗಿ, ಬಹುತೇಕ ಎಲ್ಲ ರಾಜ್ಯಗಳಲ್ಲೂ ಬಡ ಹಾಗೂ ಹಿಂದುಳಿದ ವರ್ಗಗಳ ಮತದಾರರು ಬಿಜೆಪಿಯನ್ನು ಬೆಂಬಲಿಸಿದರು. ಈ ವರ್ಗದ ಮತದಾರರ ವಿಶ್ವಾಸ ಗಳಿಸುವಲ್ಲಿ ಉಳಿದೆಲ್ಲ ಪಕ್ಷಗಳು
ವಿಫ‌ಲವಾದವು’ ಎಂದು ಹೇಳಿದ್ದಾರೆ. ಅಲ್ಲದೆ, ಬಿಹಾರ ಮಾದರಿಯಲ್ಲಿ ಶಕ್ತಿಶಾಲಿ ಒಕ್ಕೂಟ ರಚಿಸಿಕೊಳ್ಳುವಲ್ಲಿ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ ವಿಫ‌ಲವಾಗಿದ್ದು ಕೂಡ ಬಿಜೆಪಿಗೆ ವರವಾಯಿತು ಎಂದು ನಿತೀಶ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next