Advertisement

CM ನಿತೀಶ್‌ರನ್ನು ಸಿಕ್ಖ್ ಗುರುವಿಗೆ ಹೋಲಿಸಿದ್ದಕ್ಕೆ ಧಾರ್ಮಿಕ ಶಿಕ್ಷೆ

06:33 AM Jan 29, 2019 | udayavani editorial |

ಅಮೃತಸರ : ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಸಿಕ್ಖ್ ಗುರುವಿಗೆ ಹೋಲಿಸಿದ ಅಪರಾಧಕ್ಕಾಗಿ ಗುರುದ್ವಾರ ಪಟ್ನಾ ಸಾಹಿಬ್‌ ಪ್ರಬಂಧಕ ಸಮಿತಿಯ  ಅಧ್ಯಕ್ಷ  ಅವತಾರ್‌ ಸಿಂಗ್‌ ಹಿತ್‌ ಅವರಿಗೆ ಧಾರ್ಮಿಕ ಶಿಕ್ಷೆಯನ್ನು ನೀಡಲಾಗಿದೆ.

Advertisement

ಈ ಧಾರ್ಮಿಕ ಶಿಕ್ಷೆಯ ಪ್ರಕಾರ ಮುಂದಿನ ಹನ್ನೆರಡು ದಿನಗಳ ಕಾಲ ಅವತಾರ್‌ ಸಿಂಗ್‌ ಅವರು ಎರಡು ಗುರುದ್ವಾರಗಳಲ್ಲಿ ಭಕ್ತರ ಬೂಟುಗಳನ್ನು ಸ್ವಚ್ಚ ಗೊಳಿಸಬೇಕಾಗಿದೆ ಮತ್ತು ಸಮುದಾಯ ಅಡುಗೆ ಕೋಣೆಯ ಪಾತ್ರೆಗಳನ್ನು ತೊಳೆಯಬೇಕಾಗಿದೆ. 

ಸಿಕ್ಖರ ಪರಮೋಚ್ಚ ಧಾರ್ಮಿಕ ಮಂದಿರವಾಗಿರುವ ಅಕಾಲ್‌ ತಕ್‌ತ್‌ ಜತ್ತೇದಾರ  ಗ್ಯಾನಿ ಹರ್‌ ಪ್ರೀತ್‌ ಸಿಂಗ್‌ಅವರು ಅವತಾರ್‌ ಸಿಂಗ್‌ ಹಿತ್‌ ಅವರಿಗೆ ಈ ಧಾರ್ಮಿಕ ಶಿಕ್ಷೆ ನೀಡಿದ್ದಾರೆ.

ನಿನ್ನೆ ಸೋಮವಾರ ಅಮೃತಸರದಲ್ಲಿ ಅಕಾಲ್‌ ತಕ್‌ತ್‌ ಜತ್ತೇದಾರರು ಹಿತ್‌ ಅವರ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಶಿಕ್ಷೆ ಪ್ರಕಟಿಸಿದರು. 

ಹಿತ್‌ ಅವರು ಎರಡು ಗುರುದ್ವಾರಗಳಲ್ಲಿ ಧಾರ್ಮಿಕ ಶ್ಲೋಕಗಳನ್ನು ಆಲಿಸಬೇಕು ಎಂದು ಕೂಡ ಜತ್ತೇದಾರರು ಅಪ್ಪಣೆ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next