Advertisement

ಶಿರಾಡಿ, ಚಾರ್ಮಾಡಿ, ಸಂಪಾಜೆ ರಸ್ತೆ ರಕ್ಷಣೆಗೆ 115 ಕೋ.ರೂ.: ಸಚಿವ ನಿತಿನ್‌ ಗಡ್ಕರಿ

12:35 AM Dec 20, 2020 | sudhir |

ಬೆಂಗಳೂರು: ರಸ್ತೆ ಬಳಕೆದಾರರ ಸುರಕ್ಷೆಯ ದೃಷ್ಟಿಯಿಂದ ರಾ.ಹೆ.-75ರ ಶಿರಾಡಿ, ರಾ.ಹೆ. 73ರ ಚಾರ್ಮಾಡಿ ಮತ್ತು ರಾ.ಹೆ. 275ರ ಸಂಪಾಜೆ ಘಾಟಿಯ ಇಳಿಜಾರುಗಳಲ್ಲಿ ಸೂಕ್ತ ರಕ್ಷಣ ಕ್ರಮ ಕೈಗೊಳ್ಳಲು 115 ಕೋಟಿ ರೂ.ಗಳ ವೆಚ್ಚದ ಮೂರು ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ರಾಜ್ಯದಲ್ಲಿ 10,904 ಕೋ.ರೂ. ವೆಚ್ಚದಲ್ಲಿ 1,197 ಕಿ.ಮೀ. ಉದ್ದದ 33 ರಾ. ಹೆ. ಯೋಜನೆ ಶಂಕುಸ್ಥಾಪನೆ ಮತ್ತು ಲೋಕಾ ರ್ಪಣೆಯನ್ನು ಶನಿವಾರ ವರ್ಚುವಲ್‌ ಆಗಿ ನೆರವೇರಿಸಿ ಮಾತನಾಡಿ, ಶಿರಾಡಿಯಲ್ಲಿ 23.60 ಕಿ.ಮೀ. ಸುರಂಗ ಕಾಮಗಾರಿಯ ವಿಸ್ತೃತ ಯೋಜನ ವರದಿಯನ್ನು ಅನುಮೋದಿಸಲಾಗಿದೆ. ಇದರ ಅಂದಾಜು ವೆಚ್ಚ 10 ಸಾವಿರ ಕೋ. ರೂ. ಬಿಡ್‌ ದಾಖಲೆಗಳು, ಅನುಮತಿ ಮತ್ತು ಭೂ ಸ್ವಾಧೀನ ಯೋಜನೆಗಳು ಪ್ರಗತಿಯಲ್ಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next