Advertisement

ಬೆಂಗಳೂರು ಚೆನ್ನೈ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ: ಸಚಿವ ನಿತಿನ್‌ ಗಡ್ಕರಿ

08:54 PM Feb 19, 2023 | Team Udayavani |

ನವದೆಹಲಿ:ಭಾರತವು ದಾಖಲೆ ವೇಗದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿದ್ದು, ಮುಂದಿನ 2 ವರ್ಷಗಳಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿ ಜಾಲವು ಶೇ.37ರಷ್ಟು ಹೆಚ್ಚಳವಾಗಲಿದೆ. ಬೆಂಗಳೂರು, ಚೆನ್ನೈ, ಪುಣೆ, ನಾಗ್ಪುರ, ಎನ್ನೋರ್‌, ವಿಶಾಖಪಟ್ಟಣಂ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಎಕನಾಮಿಕ್‌ ಟೈಮ್ಸ್‌ ಜಾಗತಿಕ ಉದ್ದಿಮೆ ಶೃಂಗದ 7ನೇ ಆವೃತ್ತಿಯಲ್ಲಿ ಮಾತನಾಡಿರುವ ಸಚಿವ ಗಡ್ಕರಿ, 2025ರ ವೇಳೆಗೆ 2 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗ ಇದು 96 ಸಾವಿರ ಕಿ.ಮೀ. ಆಗಿತ್ತು. ಈಗ ಅದು 1.46 ಲಕ್ಷ ಕಿ.ಮೀ.ಗೆ ತಲುಪಿದೆ ಎಂದೂ ಹೇಳಿದ್ದಾರೆ.

ಭಾರತದ ಕರಾವಳಿ ಭಾಗವನ್ನು ಅಭಿವೃದ್ಧಿಪಡಿಸುವಂಥ 16 ಲಕ್ಷ ಕೋಟಿ ರೂ. ವೆಚ್ಚದ ಸಾಗರಮಾಲ ಯೋಜನೆ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಮುಂದಿನ ಒಂದು ವರ್ಷದಲ್ಲಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದೂ ಗಡ್ಕರಿ ನುಡಿದಿದ್ದಾರೆ.

6 ವಿಶ್ವದಾಖಲೆ:
ನಮ್ಮ ಸಚಿವಾಲಯವು 6 ವಿಶ್ವದಾಖಲೆಗಳನ್ನು ಪಡೆದಿದೆ. ದಿನಕ್ಕೆ 38 ಕಿ.ಮೀ. ಹೆದ್ದಾರಿ ನಿರ್ಮಾಣ, ಅಮರಾವತಿ-ಅಕೋಲಾ ಸೆಕ್ಷನ್‌ನಲ್ಲಿ ಕೇವಲ 105 ಗಂಟೆಗಳು ಮತ್ತು 33 ನಿಮಿಷಗಳಲ್ಲಿ 75 ಕಿ.ಮೀ. ಉದ್ದದ ಏಕಪಥದ ಬಿಟುಮಿನಸ್‌ ಕಾಂಕ್ರೀಟ್‌ ರಸ್ತೆ, ಕೇವಲ 18 ಗಂಟೆಗಳಲ್ಲಿ ವಿಜಯಪುರ-ಸೋಲಾಪುರ ಏಕಪಥದ ಬಿಟುಮಿನಸ್‌ ರಸ್ತೆ (26 ಕಿ.ಮೀ.) ಹಾಗೂ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ 24 ಗಂಟೆಗಳ ಅವಧಿಯಲ್ಲಿ 2.5 ಕಿ.ಮೀ. ಚತುಷ್ಪಥ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣದಲ್ಲಿ ನಾವು ದಾಖಲೆ ಬರೆದಿದ್ದೇವೆ ಎಂದೂ ಗಡ್ಕರಿ ಸ್ಮರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next