Advertisement

ಹಿಂದೆ ನಡೆದಿದ್ದನ್ನು ನೆನಪಿಸಿಕೊಳ್ಳುವುದು ಅಗತ್ಯ: ನಿರ್ಮಲಾ

12:08 PM Oct 19, 2019 | Team Udayavani |

ವಾಷಿಂಗ್ಟನ್‌: ಯಾವಾಗ ಮತ್ತು ಏನು ತಪ್ಪು ಸಂಭವಿಸಿದೆ ಎಂದು ಜ್ಞಾಪಿಸಿಕೊಳ್ಳುವುದು ಅತ್ಯಗತ್ಯ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳುವ ಮೂಲಕ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ಗೆ ತಿರುಗೇಟು ನೀಡಿದ್ದಾರೆ.

Advertisement

ಈ ಮೂಲಕ ಆರ್ಥಿಕ ಕುಸಿತಕ್ಕೆ ಸಂಬಂಧಿಸಿ ಮನಮೋಹನ ಸಿಂಗ್‌ ಮತ್ತು ನಿರ್ಮಲಾ ಸೀತಾರಾಮನ್‌ ಮಧ್ಯೆ ನಡೆಯುತ್ತಿರುವ ಮಾತಿನ ಕದನ ಮುಂದುವರಿದಂತಾಗಿದೆ. ಐದು ವರ್ಷಗಳವರೆಗೆ ಆಡಳಿತ ನಡೆಸಿದ ನಂತರವೂ, ಎಲ್ಲ ಆರ್ಥಿಕ ಕುಸಿತಕ್ಕೂ ಯುಪಿಎ ಸರ್ಕಾರವನ್ನು ಹೊಣೆ ಮಾಡುವುದನ್ನು ಎನ್‌ಡಿಎ ಸರ್ಕಾರ ನಿಲ್ಲಿಸಬೇಕು ಎಂದು ಸಿಂಗ್‌ ಗುರುವಾರ ಹೇಳಿದ್ದರು.

ಅಮೆರಿಕದ ವಾಷಿಂಗ್ಟನ್‌ನಲ್ಲಿ ಪ್ರತಿಕ್ರಿಯಿಸಿದ ನಿರ್ಮಲಾ, ಯುಪಿಎ ಸರ್ಕಾರದ ಮೇಲೆ ಹೊಣೆ ಹೊರಿಸದಂತೆ ನನಗೆ ಸಿಂಗ್‌ ಹೇಳುತ್ತಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಏನು ತಪ್ಪು ನಡೆದಿದೆ ಎಂಬುದನ್ನು ನೆನಪಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ:
ಭಾರತದ ಜಿಡಿಪಿ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಫ್) ನಿರೀಕ್ಷಿಸಿದರೂ, ವಿಶ್ವದಲ್ಲೇ ಅತಿ ವೇಗವಾಗಿ ಪ್ರಗತಿ ಕಾಣುತ್ತಿರುವ ಆರ್ಥಿಕತೆ ಭಾರತದ್ದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇತ್ತೀಚಿನ ಐಎಂಎಫ್ ವಿತ್ತ ನಿರೀಕ್ಷೆಯಲ್ಲಿ ವಿಶ್ವದ ಎಲ್ಲ ಆರ್ಥಿಕತೆಗಳ ಪ್ರಗತಿ ನಿರೀಕ್ಷೆಯನ್ನೂ ಇಳಿಸಲಾಗಿದೆ. ಅದೇ ರೀತಿ ಭಾರತದ ಪ್ರಗತಿ ನಿರೀಕ್ಷೆಯನ್ನೂ ಇಳಿಸಲಾಗಿದೆ. ಆದರೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next