Advertisement

KCC ಯೋಜನೆಯಡಿ ಸಾಕಷ್ಟು ಹಣ ಮೀಸಲು- ನಿರ್ಮಲಾ ಸೀತಾರಾಮನ್‌

11:22 PM Sep 21, 2023 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೆಸಿಸಿ ಯೋಜನೆಯಡಿ ಸಾಕಷ್ಟು ಹಣ ಮೀಸಲಿಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು. ಕಿಸಾನ್‌ ರಿನ್‌ ಪೋರ್ಟಲ್‌, ಕೆಸಿಸಿ ಘರ್‌ ಘರ್‌ ಅಭಿಯಾನ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಗೆ ಚಾಲನೆ ನೀಡಿ ಈ ಕುರಿತು ಮಾತನಾಡಿದ ಅವರು, ಘರ್‌ ಘರ್‌ ಕೆಸಿಸಿ ಅಭಿಯಾನದ ಯಶಸ್ಸಿಗೆ ಬ್ಯಾಂಕ್‌ಗಳ ಸಂಪೂರ್ಣ ಸಹಕಾರ ಮುಖ್ಯವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೆಸಿಸಿ ಯೋಜನೆಯಡಿ ಸಾಕಷ್ಟು ಹಣವನ್ನು ಮೀಸಲಿಟ್ಟಿದೆ. ರೈತರಿಗೆ ಸುಲಭವಾದ ಅಲ್ಪಾವಧಿಯ ಸಾಲ ಪಡೆಯಲು ಸಹಕಾರಿಯಾಗಿದೆ. ಬೆಳೆ ವಿಮೆ ಯೋಜನೆಯು 1,40,000 ಕೋಟಿ ರೂ.ಗೂ ಹೆಚ್ಚು ವಿಮಾ ಮೊತ್ತ ಹೊಂದಿದೆ. ಅಕ್ಕಿ ಮತ್ತು ಗೋಧಿ ಬೆಳೆ ಉತ್ಪಾದನೆಗೆ ವಿಸ್ತರಿಸಲು ಕರೆ ನೀಡಿದರು. ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಸಾಲ ಮಂಜೂರಾತಿ ಮತ್ತು ಸಾಲ ವಿತರಣೆ ಕುರಿತು ಅಧ್ಯಯನ ಮಾಡಲು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಪಿಎಂ ಎಫ್ಬಿಐ ಸಿಇಒ ರಿತೇಶ್‌ ಚೌಹಾಣ್‌, ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಕಾರ್ಯದರ್ಶಿ ಕೈಲಾಶ್‌ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next