Advertisement

ಇವರು ಕ್ಷಮೆಗೆ ಅರ್ಹರಲ್ಲ, ಸುಪ್ರೀಂ ತೀರ್ಪಿಗೆ ನಿರ್ಭಯಾ ಪೋಷಕರ ಸಂತಸ

03:42 PM May 05, 2017 | Team Udayavani |

ನವದೆಹಲಿ:ದೇಶಾದ್ಯಂತ ಆಕ್ರೋಶದ ಬೆಂಕಿ ಹಚ್ಚಿದ ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿರುವುದಕ್ಕೆ ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
 
ನಿರ್ಭಯಾ ಪ್ರಕರಣದ ಅಪರೂಪದಲ್ಲೇ ಅಪರೂಪದ ಪ್ರಕರಣವನ್ನಾಗಿ ಪರಿಗಣಿಸಲಾಗಿದೆ. ಅಲ್ಲದೇ ಅಪರಾಧಿಗಳು ಕ್ಷಮೆಗೆ ಅರ್ಹರಾದವರೇ ಅಲ್ಲ, ಹಾಗಾಗಿ ನಾಲ್ವರಿಗೂ ಮರಣದಂಡನೆಯೇ ಸೂಕ್ತ ಶಿಕ್ಷೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯವ್ಯಕ್ತಪಡಿಸಿತ್ತು.

Advertisement

ಸುಪ್ರೀಂ ತೀರ್ಪು ಪ್ರಕಟವಾದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಭಯಾ ತಂದೆ, ಇದು ನನ್ನ ಕುಟುಂಬಕ್ಕೆ ಸಿಕ್ಕ ಜಯ, ಈ ತೀರ್ಪಿನಿಂದ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಇದು ಕೇವಲ ನಮ್ಮ ಗೆಲುವು ಅಲ್ಲ, ಇದು ದೇಶದ ಪ್ರತಿಯೊಬ್ಬರ ಗೆಲುವಾಗಿದೆ. ನ್ಯಾಯ ದೊರಕುವುದು ತಡವಾಗಿದೆ, ಆದರೆ ನ್ಯಾಯ ಕೊನೆಗೂ ಸಿಕ್ಕಿದೆ ಎಂದು ನಿರ್ಭಯಾ ತಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next