Advertisement

ನಿರ್ಭಯಾ ಗ್ಯಾಂಗ್‌ ರೇಪ್‌: ಪೋಷಕರ ಮನವಿ ಮಾನ್ಯ ಮಾಡಿದ ದಿಲ್ಲಿ ಹೈ ಕೋರ್ಟ್‌

09:53 AM Nov 18, 2019 | Team Udayavani |

ಹೊಸದಿಲ್ಲಿ: ನಿರ್ಭಯಾ ಪ್ರಕರಣವನ್ನು ಮತ್ತೂಂದು ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಕೋರಿ ಪೋಷಕರು ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ನ್ಯಾಯಾಲಯ ಮಾನ್ಯಮಾಡಿದೆ. ಹಿಂದಿನ ಇಬ್ಬರು ನ್ಯಾಯಾಧೀಶರು ವರ್ಗಾವಣೆಯಾದ ಕಾರಣ ಈ ಅರ್ಜಿಯನ್ನು ನಿರ್ಭಯಾ ಪೋಷಕರು ಸಲ್ಲಿಸಿದ್ದರು.

Advertisement

ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಈ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಪ್ರತ್ಯೇಕವಾಗಿ ಆಲಿಸಲು ಸ್ಥಾಪಿಸಲಾದ ವಿಶೇಷ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಅತ್ಯಾಚಾರ ಆರೋಪಿಗಳ ಮರಣದಂಡನೆಯನ್ನು ತ್ವರಿತಗೊಳಿಸಲು ಸಂತ್ರಸ್ತೆಯ ಪೋಷಕರು ತಿಹಾರ್‌ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ನವೆಂಬರ್‌ 25ರಂದು ವಿಚಾರಣೆಗೆ ಬರಲಿದೆ.

2012ರ ಡಿಸೆಂಬರ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿಯಾಗಿದ್ದ ನಿರ್ಭಯ ಅವರ ಪೋಷಕರು ಈ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ 4 ಆರೋಪಿಗಳಾದ ಮುಖೇಶ್‌, ಪವನ್‌, ವಿನಯ್‌ ಮತ್ತು ಅಕ್ಷಯ್‌ ಎಂಬ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಸಲ್ಲಿಸಲಾದ ಕೋರಿ ಪಿಐಎಲ್‌ ಅನ್ನು ಸುಪ್ರೀಂ ಕೋರ್ಟ್‌ 2018ರ ಡಿಸೆಂಬರ್‌ 12 ರಂದು ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next