Advertisement

ನಿರ್ಭಯಾ ಕೇಸ್; ನಾಲ್ವರ ದೋಷಿತರ ಗಲ್ಲುಶಿಕ್ಷೆ ದಿನಾಂಕ ನಿಗದಿ ಅರ್ಜಿ ವಜಾ

09:59 AM Feb 08, 2020 | Nagendra Trasi |

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ದೋಷಿತರನ್ನು ಗಲ್ಲಿಗೇರಿಸಲು ಮತ್ತೆ ಹೊಸ ದಿನಾಂಕ ನಿಗದಿಪಡಿಸಬೇಕೆಂದು ಕೋರಿ ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

Advertisement

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳು ಒಂದು ವಾರದೊಳಗೆ ಎಲ್ಲಾ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ದಿಲ್ಲಿ ಕೋರ್ಟ್ ಫೆ.5ರಂದು ಗಡುವು ನೀಡಿರುವ ಬಗ್ಗೆ ಹೆಚ್ಚುವರಿ ಸೆಷನ್ಸ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಇಂದಿನ ಅರ್ಜಿ ವಿಚಾರಣೆ ವೇಳೆ ಗಮನ ಸೆಳೆದಿರುವುದಾಗಿ ವರದಿ ತಿಳಿಸಿದೆ.

ಒಂದು ವೇಳೆ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಿದ ಮೇಲೆ ಮತ್ತೆ ಕಾನೂನು ಅನುಮತಿ ಕೊಟ್ಟರೂ ಬದುಕಿಸಲು ಸಾಧ್ಯವಿದೆಯೇ…ಇದೊಂದು ಅಪರಾಧಿ ಪಾಪಕೃತ್ಯವಾಗಲಿದೆ. ಹೈಕೋರ್ಟ್ ಫೆ.5ರಂದು ದೋಷಿತರಿಗೆ ಒಂದು ವಾರಗಳ ಕಾಲಾವಕಾಶ ನೀಡಿದೆ. ಅದು ನ್ಯಾಯದ ಹಿತಾಸಕ್ತಿ ಮೇಲೆ ಅವರಿಗೆ ಲಭ್ಯವಾಗಲಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಹೇಳಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಆರೋಪಿಗಳನ್ನು ಗಲ್ಲಿಗೇರಿಸಲು ಅನುಮಾನ ಮತ್ತು ಅನಿಸಿಕೆ ಆಧಾರದ ಮೇಲೆಯೇ ಡೆತ್ ವಾರಂಟ್ ಹೊರಡಿಸಲು ಸಾಧ್ಯವಿಲ್ಲ ಎಂಬ ಅಪರಾಧಿಗಳ ಪರ ವಕೀಲರ ವಾದವನ್ನು ಒಪ್ಪುವುದಾಗಿ ಹೇಳಿದ ನ್ಯಾಯಾಧೀಶರು, ಈ ಅರ್ಜಿ ಅರ್ಹತೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ವಜಾಗೊಳಿಸಿದ್ದೇನೆ. ಅಲ್ಲದೇ ಅಗತ್ಯವಿದ್ದಲ್ಲಿ ಸೂಕ್ತ ಮೇಲ್ಮನವಿಯೊಂದಿಗೆ ಸುಪ್ರೀಂಕೋರ್ಟ್ ಗೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next