Advertisement

‘ನಿರ್ಭಯಾ’ ಅರೋಪಿ ವಿಚಾರಣೆ ನಾಳೆಗೆ ಮುಂದೂಡಿಕೆ: ಹಿಂದೆ ಸರಿದ ಸಿಜೆಐ

09:57 AM Dec 18, 2019 | keerthan |

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅತ್ಯಾಚಾರಿಗಳಲ್ಲಿ ಓರ್ವನಾದ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಲಾಗಿದೆ.

Advertisement

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶರತ್ ಎ ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠ ಇಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಬೇಕಾಗಿತ್ತು. ಆದರೆ ಸ್ವತಃ ಮುಖ್ಯ ನ್ಯಾಯಮೂರ್ತಿ ಶರತ್ ಎ ಬೋಬ್ಡೆ ಹಿಂದೆ ಸರಿದ ಕಾರಣ ನಾಳೆಗೆ ಮುಂದೂಡಲಾಯಿತು.

ಬುಧವಾರ ಬೆಳಿಗ್ಗೆ 10.30ಕ್ಕೆ ಹೊಸ ನ್ಯಾಯಪೀಠ ರಚಿಸಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಇದೇ ಪ್ರಕರಣದಲ್ಲಿ ನಿರ್ಭಯಾ ಪರವಾಗಿ ಸಿಜೆಐ ಸಂಬಂಧಿ ವಾದ ಮಾಡಿದ್ದ ಕಾರಣ ಎಸ್. ಎ. ಬೋಬ್ಡೆ ವಿಚಾರಣೆಯಿಂದ ಹಿಂದೆ ಸರಿದರು.

ಪ್ರಕರಣದ ಆರೋಪಿಗಳ ಓರ್ವನಾಗಿದ್ದ ಅಕ್ಷಯ್ ಕುಮಾರ್ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದ.

Advertisement

2012ರ ಡಿಸೆಂಬರ್ 16ರಂದು ಹೊಸದಿಲ್ಲಿಯ ಬಸ್ ನಲ್ಲಿ ನಿರ್ಭಯಾ ಮೇಲೆ ಆರು ಜನರು ಅತ್ಯಾಚಾರವೆಸಗಿದ್ದರು. ಅದರಲ್ಲಿ ಓರ್ವ ಬಾಲಾಪರಾಧಿಯಾದ ಕಾರಣ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದು, ಮತ್ತೋರ್ವ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಉಳಿದ ಆರೋಪಿಗಳಿಗೆ ದೆಹಲಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next