Advertisement

ಕುಮಾರಸ್ವಾಮಿ ಪುತ್ರನಾಗಿ ಹುಟ್ಟಿದ್ದು ನನ್ನ ಭಾಗ್ಯ…: ಭಾವುಕರಾದ ನಿಖಿಲ್

10:26 AM Dec 20, 2022 | Team Udayavani |

ರಾಮನಗರ: ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಕುಮಾರಸ್ವಾಮಿ ಪುತ್ರನಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದ ಘಟನೆ ಸೋಮವಾರ ಚನ್ನಪಟ್ಟಣದಲ್ಲಿ ನಡೆಯಿತು.

Advertisement

ಸಮಾವೇಶದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ 20 ವರ್ಷ ಆಡಳಿತ ನಡೆಸಿದವರು ಏನು‌ ಮಾಡಲಿಲ್ಲ. ಭಗೀರಥ ಎಂದು ಹೇಳಿಕೊಂಡು ಓಡಾಡ್ತಾರಷ್ಟೇ. ನಿಜವಾದ ಭಗೀರಥ ನಮ್ಮ ನಿಮ್ಮೆಲ್ಲರ ಪ್ರೀತಿಯ ಕುಮಾರಣ್ಣ. ಚನ್ನಪಟ್ಟಣಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಗೆಲ್ತಾರೆ ಕುಮಾರಣ್ಣ ಎಂದು ಹೀಗಾಗಿ ನನಗೆ ವಿಶ್ವಾಸವಿದೆ. 50 ಸಾವಿರಕ್ಕೂ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುತ್ತಾರೆ ಎಂದರು.

ಇವತ್ತು ಚನ್ನಪಟ್ಟಣದಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಪಂಚರತ್ನ ರಥಯಾತ್ರೆ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಕುಮಾರಪರ್ವವನ್ನು ಮೀರಿಸಿ ಈ ಕಾರ್ಯಕ್ರಮ ಯಶಸ್ಸು ಮಾಡಿದ್ದೀರಿ. ಯುವಸಮೂಹ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಪಂಚರತ್ನ ಯಾತ್ರೆಗೆ ಬೆಂಬಲ ನೀಡಿದ್ದೀರಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾವೆಂದು ಚಿರ ಋಣಿ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸುದಕ್ಕೆ ನಾನು ಒಪ್ಪಿರಲಿಲ್ಲ. ಅಲ್ಲಿ ಸ್ಥಳೀಯ ಅಭ್ಯರ್ಥಿ ಇಲ್ಲದ ಪರಿಣಾಮ ನಿಖಿಲ್ ಅನಿವಾರ್ಯ, ಸ್ಪರ್ಧೆ ಮಾಡಿ ಅಂತ ಅನಿತಾ ಕುಮಾರಸ್ವಾಮಿ ಘೋಷಣೆ ಮಾಡಿದರು. ಇವತ್ತು ಮೊದಲ ಪಟ್ಟಿ ಬಿಡುಗಡೆ‌ ಮಾಡಿ ಬಂದಾಗ ಇಲ್ಲಿ ನನ್ನನ್ನು ಸ್ವಾಗತ ಮಾಡಿದ್ದು ಇತಿಹಾಸ ಎಂದರು.

ಇದನ್ನೂ ಓದಿ:8ನೇ ಕ್ಲಾಸ್‌ ಫೇಲ್, ಐಪಿಎಸ್‌ ಅಧಿಕಾರಿಯ ಪೋಸ್.. ಮಹಿಳೆಯರನ್ನು ವಂಚಿಸಿ ಹಣ ಲೂಟಿ

Advertisement

2023 ರ ಚುನಾವಣೆಯಲ್ಲಿ ನಾನು ಸಿಎಂ ಆಗಬೇಕು ಎನ್ನುವುದು ದೈವ ಇಚ್ಛೆ, ನಿಮ್ಮ ಆಶೀರ್ವಾದ. ನಮ್ಮ ರಾಜ್ಯದಲ್ಲಿ ಹಣಕ್ಕೆ ತೊಂದರೆಯಿಲ್ಲ, ಭಾಗ್ಯಲಕ್ಷ್ಮೀ ತುಂಬಿದ್ದಾಳೆ. ಸಾಮಾನ್ಯ ಕಾರ್ಯಕರ್ತ ನಿಲ್ಲಿಸಿದರೂ ಕನಕಪುರ ಕ್ಷೇತ್ರದ ಮಹಾ ಜನತೆ 60-70 ಸಾವಿರ ಮತ ನೀಡುತ್ತಾರೆ. ಕನಕಪುರ ತಾ. ಸಾತನೂರಿನಲ್ಲಿ ಮಧ್ಯರಾತ್ರಿ 1:45 ಗಂಟೆಗೆ ಹೋದೆ. ಅರ್ಧ ರಾತ್ರಿಯಲ್ಲೂ ಕನಕಪುರ ಜನ ನಮ್ಮನ್ನ ಸ್ವಾಗತ ಮಾಡಿದರು ಎಂದರು.

ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್ ಕಂಪನಿ ಹತ್ತಿರ ಹೋಗಿ ಒಬ್ಬೊಬ್ಬರು ಒಂದು ಪ್ಯಾಕೆಟ್ ತಗೊಂಡು ಬಂದರು. ಆದರೆ ನಾನು ರೈತರ ಜಮೀನು ಉಳಿವಿಗಾಗಿ ಹೋರಾಟ ಮಾಡಿದೆ. ಆದರೆ ಆಗಿನ ಸಮ್ಮಿಶ್ರ ಸರ್ಕಾರದ ಮಹಾ ನಾಯಕರು ನನ್ನನ್ನು ಬಿಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಹಣ ಇಲ್ಲ ಹೇಗೆ ಸಾಲಮನ್ನಾ ಮಾಡುತ್ತಾರೆ ಎಂದರು. ಆದರೆ ಸರ್ಕಾರ ಇದ್ದ ಹದಿನಾಲ್ಕು ತಿಂಗಳಲ್ಲಿ ರೈತರ ಸಾಲಮನ್ನಾ ಮಾಡಿದೆ. ಕಣ್ವಾ ರಸ್ತೆ ಕಾಮಗಾರಿ ವಿಳಂಬ ವಿಚಾರ ಮನೆಗೆ ಕರೆಸಿ ಎಚ್ಚರಿಕೆ ಕೊಟ್ಟೆ, ಕಳಪೆ ಕಾಮಗಾರಿ ಆದರೆ ಬ್ಲ್ಯಾಕ್ ಲಿಸ್ಟ್ ಹಾಕಿಸ್ತೀನಿ ಅಂದೆ. ಇಲ್ಲಿನ ಭಗೀರಥ ಅಂತ ಕಟೌಟ್ ಹಾಕಿಸಿಕೊಳ್ಳುವನು ನನ್ನ ಬಗ್ಗೆ ಮಾತಾಡ್ತಾನೆ ಎಂದು ಹೆಸರು ಹೇಳದೆ ಸಿಪಿ ಯೋಗೇಶ್ವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next