Advertisement

ಸಿನಿಮಾ ಹಾಗೂ ಕಿರುತೆರೆ ಕಾರ್ಮಿಕರಿಗೆ ನಿಖೀಲ್‌ ಸಹಾಯ

10:17 AM Mar 31, 2020 | Suhan S |

ಕೋವಿಡ್ 19 ವೈರಸ್‌ನಿಂದ ಚಿತ್ರರಂಗದ ಅನೇಕ ದಿನಗೂಲಿ ನೌಕರರು ತತ್ತರಿಸಿದ್ದಾರೆ. ಈಗಾಗಲೇ ಅವರ ನೆರವಿಗೆ ನಟರು, ನಟಿಯರು, ನಿರ್ಮಾಪಕರು ಚಿತ್ರರಂಗದ ಸಂಘ-ಸಂಸ್ಥೆಗಳು ಮುಂದಾಗಿವೆ. ಈಗ ನಿಖೀಲ್‌ಕುಮಾರ್‌ ಕೂಡ ಸಹಾಯಕ್ಕೆ ಮುಂದಾಗಿದ್ದಾರೆ. ಅವರು, ಚಿತ್ರರಂಗದ ಒಟ್ಟು 18 ವಿಭಾಗದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರು ಸೇರಿದಂತೆ ಕಿರುತೆರೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೂ ಸೇರಿ ಒಟ್ಟು 37 ಲಕ್ಷ ರುಪಾಯಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಶನಿವಾರ ಸಾ.ರಾ.ಗೋವಿಂದು ಅವರ ಮೂಲಕ ಚೆಕ್‌ ವಿತರಿಸುವುದರ ಜೊತೆಗೆ ಸಿನಿಮಾ ಕಾರ್ಮಿಕರ ಬೆಂಬಲಕ್ಕೆ ಸದಾ ಇರುವುದನ್ನೂ ಘೋಷಿಸಿದ್ದಾರೆ. ಸಾಹಸ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಲೈಟ್‌ ಮ್ಯಾನ್‌ ಸಂಘ, ಸಿನಿಮಾಚಾಲಕರ ಸಂಘ, ನಿರ್ಮಾಣ ಸಹಾಯಕರ ಸಂಘ, ನೃತ್ಯ ನಿರ್ದೇಶಕರ ಸಂಘ,ಕಾಸ್ಟೂéಮರ್‌ ಸಂಘ, ಸ್ಟಿಲ್‌ ಫೋಟೋಗ್ರಾಫ‌ರ್‌ ಸಂಘ, ಛಾಯಾಗ್ರಾಹಕರ ಸಂಘ, ಜೂನಿಯರ್‌ ಆರ್ಟಿಸ್ಟ್‌ ಅಸೋಸಿಯೇಷನ್‌ ಸೇರಿದಂತೆ ಚಿತ್ರರಂಗದಲ್ಲಿರುವ 18 ವಿಭಾಗದಲ್ಲಿ ಕೆಲಸ ಮಾಡುವ ನೌಕರರಿಗೆ ಹಾಗು ಕಿರುತೆರೆ ಕಾರ್ಮಿಕರಿಗೂ ಚೆಕ್‌ ಮೂಲಕ ಸಹಾಯ ಹಸ್ತ ಚಾಚಿರುವ ಅವರು, “ಎಲ್ಲಾ ಬಾಗಿಲುಗಳು ಮುಚ್ಚಿರುವ ಈ ಸಂದರ್ಭದಲ್ಲಿ ಸಿನಿಮಾವನ್ನೇ ನಂಬಿ ಬದುಕುತ್ತಿದ್ದ ಹಲವು ಸಿನಿ ಕಾರ್ಮಿಕರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹವರಿಲ್ಲದೇ ಸಿನಿಮಾ ಇಲ್ಲ. ನಾನೂ ಇಲ್ಲ. ಆದ್ದರಿಂದ ನನ್ನ ಪ್ರೀತಿಯ ಸಿನಿಮಾ ರಂಗದ ಕೆಲಸಗಾರರ ಖಾತೆಗೆ ನೇರವಾಗಿ ಧನ ಸಹಾಯ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ. ಆದಷ್ಟು ಸಹಾಯ ಮಾಡೋಣ, ಒಟ್ಟಾಗಿ ಬದುಕೋಣ ಎಂದಿದ್ದಾರೆ ನಿಖೀಲ್‌.

Advertisement

Udayavani is now on Telegram. Click here to join our channel and stay updated with the latest news.

Next