Advertisement

ಗೆದ್ದ “ಸಿಟ್ಟಲ್ಲಿ ಬಾಂಗ್ಲನ್ನರು ಬಾಗಿಲನ್ನೇ ಪುಡಿ ಮಾಡಿದರು!

07:10 AM Mar 18, 2018 | Team Udayavani |

ಕೊಲಂಬೊ: ಶುಕ್ರವಾರ ಶ್ರೀಲಂಕಾ ವಿರುದ್ಧ ರೋಚಕವಾಗಿ ತ್ರಿಕೋನ ಟಿ20 ಫೈನಲ್‌ಗೇರಿರುವ ಬಾಂಗ್ಲಾದೇಶ ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿದೆ. ಪಂದ್ಯದ ವೇಳೆ ನಾಯಕ ಶಕೀಬ್‌ ಹಸನ್‌ ತಂಡವನ್ನೇ ಪಂದ್ಯದಿಂದ ಹಿಂದಕ್ಕೆ ಕರೆಸಿಕೊಳ್ಳಲು ಯತ್ನಿಸಿದ್ದು, ಬದಲೀ ಆಟಗಾರ ನೂರುಲ್‌, ಲಂಕಾ ನಾಯಕ ತಿಸರ ಜೊತೆಗೆ ವಾಗ್ವಾದ ನಡೆಸಿದ್ದು ಸಾಲದೆಂಬಂತೆ ಬಾಂಗ್ಲಾ ಆಟಗಾರರು ಡ್ರೆಸಿಂಗ್‌ ಕೊಠಡಿಯ ಬಾಗಿಲನ್ನೇ ಪುಡಿಪುಡಿ ಮಾಡಿದ್ದಾರೆ. ಪಂದ್ಯದ ಅಂತಿಮ ಹಂತದಲ್ಲಿ ನಡೆದ ಜಗಳದ ಕಾವು ಉಳಿಸಿಕೊಂಡಂತಿದ್ದ ಆಟಗಾರರು ಗೆದ್ದ ನಂತರ ಈ ಕೃತ್ಯ ನಡೆಸಿದ್ದಾರೆ. ಯಾರು ಮಾಡಿದ್ದಾರೆನ್ನುವುದನ್ನು ಪತ್ತೆ ಮಾಡಲು ತನಿಖೆ ಶುರು ಮಾಡಲಾಗಿದೆ.

Advertisement

ಪುಡಿಪುಡಿಯಾಗಿ ಬಿದ್ದ ಗಾಜಿನ ಬಾಗಿಲೆದುರು ಇದ್ದ ಮೆಟ್ಟಿಲಲ್ಲಿ ಬಾಂಗ್ಲಾ ಆಟಗಾರರು ಧಡಧಡನೆ ಕೆಳಗೋಡಿ ಹೋಗಿದ್ದು ಸಿಸಿಟೀವಿಯಲ್ಲಿ ದಾಖಲಾಗಿದೆ. ಇದರ ವಿರುದ್ಧ ಸ್ವತಃ ಶ್ರೀಲಂಕಾ ಸರ್ಕಾರ ತನಿಖೆಗೆ ತೀರ್ಮಾನಿಸಿದೆ. ಈ ನಷ್ಟದ ಮೊತ್ತವನ್ನು ತುಂಬಿಕೊಡಲು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಮುಂದಾಗಿದೆ. ಘಟನೆಗೆ ಕಾರಣವಾದ ಆಟಗಾರ ಕೆಲ ಪಂದ್ಯಗಳ ಮಟ್ಟಿಗೆ ನಿಷೇಧಗೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next