Advertisement

ಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ

10:42 PM Aug 12, 2022 | Team Udayavani |

ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಒಂಬತ್ತನೇ ಆರೋಪಿಯನ್ನು ಬಂಧಿಸಿದೆ.

Advertisement

ರಾಜಸ್ಥಾನದ ಪ್ರತಾಪ್‌ಗ್ಢ ನಿವಾಸಿ ಮುಸ್ಲಿಂ ಖಾನ್‌(41) ಅಲಿಯಾಸ್‌ ಮುಸ್ಲಿಂ ರಾಜಾ ಬಂಧಿತ ಆರೋಪಿ. ಆತ ಕನ್ಹಯ್ಯ ಅವರ ಹತ್ಯೆಯಲ್ಲಿ ಪಾತ್ರ ವಹಿಸಿದ್ದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ಹಯ್ಯ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಜೂ.29ರಂದು ಕೈಗೆತ್ತಿಕೊಂಡಿತ್ತು. ಮುಸ್ಲಿಂ ಖಾನ್‌ ಬಂಧನಕ್ಕೂ ಮೊದಲು ರಾಜಸ್ಥಾನದ ಖೇರಾದಿವಾಲಾದ ನಿವಾಸಿ ಮೊಹಮದ್‌ ಜಾವೇದ್‌ನ್ನು ಜು.21ರಂದು ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next