Advertisement

ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಅಂಗಾರ ಪರಿಗಣನೆ: ಸಿಎಂ ಭರವಸೆ

01:01 AM Sep 14, 2019 | mahesh |

ಸುಳ್ಯ: ಮುಂದಿನ ರಾಜ್ಯ ಸಚಿವ ಸಂಪುಟ ವಿಸ್ತರಣೆ  ಸಂದರ್ಭ ಸುಳ್ಯ ಶಾಸಕ ಅಂಗಾರ ಅವರನ್ನು ಮಂತ್ರಿ ಪದವಿಗೆ ಪರಿಗಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ತನ್ನನ್ನು ಭೇಟಿ ಮಾಡಿದ ಸುಳ್ಯದ ಬಿಜೆಪಿ ಮುಖಂಡರಿಗೆ ಭರವಸೆ ನೀಡಿದ್ದಾರೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ನೇತೃತ್ವದಲ್ಲಿ ಶುಕ್ರವಾರ ಸುಳ್ಯ ಬಿಜೆಪಿ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತು. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ ಲಿಖೀತ ಮನವಿ ಅರ್ಪಿಸಿದರು. ಪ್ರತಿಕ್ರಿಯಿಸಿದ ಸಿಎಂ, ಆರು ತಿಂಗಳೊಳಗೆ ಸಂಪುಟ ವಿಸ್ತರಣೆ ಮಾಡಲಿದ್ದು, ಅಂಗಾರರನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಸುಳ್ಯ ಬಿಜೆಪಿಯ ವೆಂಕಟ ವಳಲಂಬೆ, ಎ.ವಿ. ತೀರ್ಥರಾಮ, ವೆಂಕಟ್‌ ದಂಬೆಕೋಡಿ, ಸುಬೋಧ್‌ ಶೆಟ್ಟಿ ಮೇನಾಲ, ಎನ್‌.ಎ. ರಾಮಚಂದ್ರ, ಮುಳಿಯ ಕೇಶವ ಭಟ್‌, ಸುಧಾಕರ ಕಾಮತ್‌, ರಾಕೇಶ್‌ ರೈ ಕೆಡೆಂಜಿ, ಮನ್ಮಥ, ವಿನಯ ಕುಮಾರ್‌, ದಿನೇಶ್‌ ಮೆದು ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next