Advertisement

ಕ್ರಿಪ್ಟೋದಿಂದ ಆರ್ಥಿಕ ಬಿಕ್ಕಟ್ಟು ಖಚಿತ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

12:16 AM Dec 22, 2022 | Team Udayavani |

ಮುಂಬಯಿ: “ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದರೆ ಅದಕ್ಕೆ ಖಾಸಗಿ ಕ್ರಿಪ್ಟೋ ಕರೆನ್ಸಿ ಕಾರಣವಾಗಲಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಎಚ್ಚರಿಸಿದ್ದಾರೆ.

Advertisement

“ಖಾಸಗಿ ಕ್ರಿಪ್ಟೋ ಕರೆನ್ಸಿ  ಮೇಲೆ ನಿಷೇಧ ಹೇರಬೇಕು ಎಂಬ ಆರ್‌ಬಿಐ ನಿಲುವಿನಲ್ಲಿ ಯಾವುದೇ ಬದ ಲಾವಣೆ ಇಲ್ಲ. ಅವುಗಳಲ್ಲಿ ಯಾವುದೇ ಮೌಲ್ಯ ಇಲ್ಲ. ಅವು ಗಳಿಂದಾಗಿ ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಸ್ಥಿರತೆಗೇ ಧಕ್ಕೆ ಬಂದರೆ ಅಚ್ಚರಿ ಇಲ್ಲ’ ಎಂದು ಹೇಳಿದ್ದಾರೆ. ಆ ಕ್ಷೇತ್ರದಲ್ಲಿ ನಡೆ ಯುವ ವಹಿವಾಟುಗಳೆಲ್ಲವೂ ಅಂದಾಜಿನದ್ದು ಎಂದರು.

ಒಂದು ವರ್ಷದಲ್ಲಿ ಕ್ರಿಪ್ಟೋ ಕರೆನ್ಸಿ ಕ್ಷೇತ್ರದಲ್ಲಿ ಉಂಟಾದ ಬೆಳವಣಿಗೆ, ವಿಶೇಷವಾಗಿ ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಿಪ್ಟೋ ಎಕ್ಸ್‌ ಚೇಂಜ್‌ ಎಫ್ಟಿಎಕ್ಸ್‌ನಲ್ಲಿ ಉಂಟಾದ ಮೋಸದ ಪ್ರಕರಣ ಅದಕ್ಕೆ ಸಾಕ್ಷಿ. ಆರ್‌ಬಿಐ ಬಿಡುಗಡೆ ಮಾಡಿದ ಡಿಜಿ ಟಲ್‌ ಕರೆನ್ಸಿ ಭಿನ್ನವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next