Advertisement

ಒಂದಷ್ಟು ಮಕ್ಕಳಿಂದ ನ್ಯೂಸೆನ್ಸ್: ಎಲ್ಲವೂ ತಿಳಿಗೊಳ್ಳುತ್ತದೆ: ಸಚಿವ ಬಿ.ಸಿ ನಾಗೇಶ್

12:12 PM Feb 18, 2022 | Team Udayavani |

ಬೆಂಗಳೂರು: ಎಲ್ಲವೂ ತಿಳಿಗೊಳ್ಳುತ್ತಿದೆ, ಶಾಲಾ‌ ಮಕ್ಕಳ ಹಾಜರಾತಿ ಚೆನ್ನಾಗಿದೆ, ಇಂದು ಯಾವುದೇ ಕಡೆ ಗಲಾಟೆ ಆಗಿಲ್ಲ, ಬೆಳಗ್ಗೆ 11 ಗಂಟೆಗೆ ನನಗೆ ಮಾಹಿತಿ ಬಂದಿದೆ, ಒಂದಷ್ಟು ಮಕ್ಕಳು ನ್ಯೂಸೆನ್ಸ್ ಕ್ರಿಯಟ್ ಮಾಡುತ್ತಿದ್ದಾರೆ, ಆದರೆ ಅವರು ಶಾಲೆ ಮಕ್ಕಳಲ್ಲ, ಬೇರೆಯವರು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಸಮವಸ್ತ್ರದಿಂದ ಬರಬೇಕು. ಡಿಗ್ರಿ ಕಾಲೇಜಿನಲ್ಲಿ ಸ್ವಲ್ಪ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಅದು ಸರಿಹೋಗುತ್ತದೆ. ಯಾವುದೇ ಮಕ್ಕಳು ಹಿಜಾಬ್ ಕೇಸರಿ ಶಾಲು ಧರಿಸುವಂತಿಲ್ಲ. ಬುರ್ಖಾ ಬಿಚ್ಚಿಡಲು ಈಗಾಗಲೇ ಒಂದು ರೂಮ್ ಕೂಡ ವ್ಯವಸ್ಥೆ ಮಾಡ್ತಿದ್ದೇವೆ ಎಂದರು.

ಡಿಗ್ರಿ ಕಾಲೇಜು ನಲ್ಲಿ ಸಮವಸ್ತ್ರ ಇಲ್ಲ. 1 ರಿಂದ 12 ತರಗತಿಯವರೆಗೆ ಸಮವಸ್ತ್ರ ಇದೆ. ಹೀಗಾಗಿ ಇಂದು‌ ಎಲ್ಲವೂ ಸರಿ ಹೋಗುತ್ತದೆ. ಮುಸ್ಲಿಂ ಸಮುದಾಯದ ಜೊತೆ ಶಾಂತಿ ಸಭೆ ನಡೆಸಿದ್ದೇವೆ. ಅವರು ಚರ್ಚೆ ಮಾಡಿದ್ದಾರೆ. ಅವರಿಗೂ ಶಾಲೆ ಪ್ರಾರಂಭವಾಗಬೇಕು. ಮಕ್ಕಳು ಶಿಕ್ಷಣ ಪಡೆಯಬೇಕು ಅಂತ ಅವರಿಗೂ ಮನಸ್ಸಿದೆ. ಎಲ್ಲವೂ ಸರಿ ದಾರಿಗೆ ಬರುತ್ತದೆ. ಕೋಟ್೯ ಆದೇಶ ಪಾಲನೆ ಮಾಡಿ ಎಂದು ಮುಖಂಡರಿಗೆ ಹೇಳಿದ್ದೇವೆ. ಮುಂದೆ ಯಾವುದೇ ತೊಂದರೆ ಆಗಲ್ಲ. ಎಲ್ಲವೂ ಸರಿ ಹೋಗಲಿದೆ ಎಂದರು.

ಇದನ್ನೂ ಓದಿ:ಮಾ.8 ಕ್ಕೆ ರಾಜ್ಯ ಬಜೆಟ್?:ರಾಜಸ್ವ ಕೊರತೆಯ ಹಗ್ಗದ ನಡಿಗೆ ನಿಭಾಯಿಸುವರೇ ಬೊಮ್ಮಾಯಿ

ಇಂದು ನಡೆದ ಗಲಾಟೆ ಬಗ್ಗೆ ವರದಿ ತೆಗೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ ತುಂಬಾ ಮುಖ್ಯ. ಹೀಗಾಗಿ ಮಕ್ಕಳಿಗೆ ಮನವೊಲಿಸುವ ಕೆಲಸ ಮಾಡುತ್ತೇವೆ. ಪೋಷಕರು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪತ್ರ ಬಂದಿದೆ, ಪತ್ರ ನೋಡಿ ಉಪಯೋಗಿಸಿಕೊಳ್ಳುತ್ತೇವೆ. ಸುರೇಶ್ ಕುಮಾರ್ ಅವರ ಮಾತನ್ನು ಇಲಾಖೆ ಅಳವಡಿಸಿಕೊಳ್ಳುತ್ತೇವೆ. ಗಲಾಟೆ ಬಗ್ಗೆ ಮಾಹಿತಿ ಗೃಹ ಸಚಿವರು ಪಡೆಯುತ್ತಿದ್ದಾರೆ. ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಗಲಾಟೆ ಆಗದೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next