Advertisement

ಮದುವೆಯಾದ ಮೂರೇ ದಿನಕ್ಕೆ ಕೋವಿಡ್‍ಗೆ ಬಲಿಯಾದ ಯುವಕ

02:58 PM May 01, 2021 | Team Udayavani |

ಉತ್ತರ ಪ್ರದೇಶ ​​​:  ದೇಶದಲ್ಲಿ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿದ್ದು, ಇದೀಗ ನವವಿವಾಹಿತನೋರ್ವನನ್ನು ಬಲಿ ಪಡೆದಿದೆ. ಮದುವೆಯಾದ ಮೂರೇ ದಿನಕ್ಕೆ ಜಾಟಾನ್​ ನಿವಾಸಿ ಅರ್ಜುನ್ ಮಹಾಮಾರಿ ಸೋಂಕಿಗೆ ಸಾವನ್ನಪ್ಪಿದ್ದಾರೆ.

Advertisement

ಏ.25 ರಂದು ಅರ್ಜುನ್​ ಅವರು ಬಬಲಿ ಎಂಬಾಕೆ ಜೊತೆ ಹಸೆಮಣೆ ಏರಿದ್ದರು. ಅಂದು ಸಂಜೆ 7ಕ್ಕೆ ಮದುವೆ ಮುಗಿಸಿಕೊಂಡು ಯುವತಿ ಮನೆಯಿಂದ ಬಿಜನೌರ್​ಗೆ ವರನ ಕುಟುಂಬ ವಾಪಸಾಗಿತ್ತು. ಆ ದಿನ ರಾತ್ರಿಯಿಂದ ಅರ್ಜನ್​ಗೆ ತೀವ್ರ ಜ್ವರ ಉಲ್ಬಣವಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜನ್​ನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತನಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿತು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೂ ಸಹ ಅರ್ಜುನ್​ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತು.

ಏಪ್ರಿಲ್​ 29ರಂದು ಆಕ್ಸಿಜನ್​ ಕೊರತೆಯಿಂದಾಗಿ ಅರ್ಜುನ್​ ಸಾವಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಎರಡೂ ಕುಟುಂಬ ಮೌನಕ್ಕೆ ಶರಣಾಯಿತು. ಮಗ ಮತ್ತು ಪತಿಯನ್ನು ಕಳೆದುಕೊಂಡ ಆ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next