Advertisement

ಉದ್ಘಾಟನೆಗೆ ತೆಂಗಿನಕಾಯಿ ಒಡೆದಾಗ ಬಿರುಕು ಬಿಟ್ಟ ಹೊಸ ರಸ್ತೆ !

10:52 AM Dec 04, 2021 | Team Udayavani |

ಲಕ್ನೋ : ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ರಸ್ತೆಯ ಉದ್ಘಾಟನೆಗಾಗಿ ತೆಂಗಿನಕಾಯಿಯನ್ನು ಒಡೆದಾಗ ಹೊಸದಾಗಿ ನಿರ್ಮಿಸಲಾದ ರಸ್ತೆ ಭಾಗವು ಬಿರುಕು ಬಿಟ್ಟ ಪ್ರಸಂಗ ನಡೆದಿದೆ.

Advertisement

ತತ್ ಕ್ಷಣ ಘಟನೆಯಿಂದ ತೀವ್ರ ಅಸಮಾಧಾನಗೊದ ಬಿಜೆಪಿ ಶಾಸಕಿ ಸುಚಿ ಚೌಧರಿ ಅವರು ಧರಣಿ ಕುಳಿತು ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೂಲಗಳ ಪ್ರಕಾರ ರಸ್ತೆ ನಿರ್ಮಾಣಕ್ಕೆ ಒಟ್ಟು 1,16,00,000 ರೂ.ವ್ಯಯ ಮಾಡಲಾಗಿತ್ತು. ಗುರುವಾರ ಸಂಜೆ ಬಿಜ್ನೋರ್ ಶಾಸಕ ಖೇಡಾ ಗ್ರಾಮದ ಬಳಿ ಏಳು ಕಿ.ಮೀ ಉದ್ದದ ರಸ್ತೆ ಉದ್ಘಾಟನೆಗೆ ತೆರಳಿದ್ದು, ಉದ್ಘಾಟನಾ ಸಮಾರಂಭದಲ್ಲಿ ರಸ್ತೆಯಲ್ಲಿ ತೆಂಗಿನಕಾಯಿ ಒಡೆದರೂ ಅದು ಒಡೆಯಲಿಲ್ಲ ಬದಲಾಗಿ ರಸ್ತೆ ಬಿರುಕು ಬಿಟ್ಟು ಜಲ್ಲಿಕಲ್ಲು ಕಾಣಿಸಿದೆ.

ಸ್ಥಳದಲ್ಲೇ ಇದ್ದ ಶಾಸಕಿಯ ಪತಿ ಮೌಸಂ ಚೌಧರಿ ಅವರು ಹೊಸದಾಗಿ ನಿರ್ಮಿಸಿದ ರಸ್ತೆಯಲ್ಲಿ ಹಾರೆ ಬಳಸಿದಾಗ ಮೇಲ್ಮೈ ಶಿಥಿಲವಾಗಲು ಪ್ರಾರಂಭಿಸಿತು.

ವಿಶ್ಲೇಷಣೆಗಾಗಿ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಕಾಸ್ ಅಗರ್ವಾಲ್ ಹೇಳಿದ್ದಾರೆ.

Advertisement

ಘಟನೆ ದೇಶದೆಲ್ಲೆಡೆ ಭಾರೀ ಸುದ್ದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next