Advertisement

ಚೌಕೀದಾರ್‌ ಮಾದರಿಯಲ್ಲಿ ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಂದ ಹೊಸ ಆಂದೋಲನ

11:45 PM Jun 16, 2019 | Sriram |

ಗುವಾಹಟಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯವರ ಚೌಕಿದಾರ್‌ ಟೀಕೆಗೆ ಪ್ರತಿಭಟನ ಸೂಚಕವಾಗಿ ಪ್ರಧಾನಿ ಮೋದಿ ಸಮೇತ ಎಲ್ಲ ಬಿಜೆಪಿ ನಾಯಕರು ಚುನಾವಣೆಗೂ ಮುನ್ನ ತಮ್ಮ ಟ್ವಿಟರ್‌ ಖಾತೆಗಳ ಹ್ಯಾಂಡಲ್‌ನ ತಮ್ಮ ಹೆಸರಿನ ಮುಂದೆ ಚೌಕಿದಾರ್‌ ಪದವನ್ನು ಸೇರಿಸಿಕೊಂಡಿದ್ದರು.

Advertisement

ಅದರಿಂದ ಸ್ಫೂರ್ತಿಗೊಂಡಿರುವ ಅಸ್ಸಾಂನ ಶಿಕ್ಷಕರ ವೃಂದ ತಮ್ಮನ್ನು ಆಟೋ ಚಾಲಕರಿಗೆ ಹೋಲಿಸಿರುವ ಅಲ್ಲಿನ ಶಿಕ್ಷಣ ಸಚಿವ ಸಿದ್ದಾರ್ಥ ಭಟ್ಟಾಚಾರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಅದಕ್ಕಾಗಿ, ಟ್ವಿಟರ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ತಮ್ಮ ಖಾತೆಗಳಲ್ಲಿರುವ ತಮ್ಮ ಹೆಸರುಗಳ ಮುಂದೆ ಹ್ಯಾಶ್‌ಟ್ಯಾಗ್‌ ಬಳಸಿ “ನಾನೂ ಕೂಡ ಆಟೋ ಚಾಲಕ’ (ಐ ಆ್ಯಮ ಆಲ್ಸೊà ಆಟೋ ಡ್ರೈವರ್‌) ಎಂದು ಬರೆದುಕೊಳ್ಳಲು ನಿರ್ಧ ರಿಸಿ ದ್ದಾರೆ. ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯ (ಟಿಇಟಿ) ಮೂಲಕ ನೀಡಲಾಗುವ ಅರ್ಹತಾ ಪ್ರಮಾಣ ಪತ್ರ ವನ್ನು, ಆಟೋ ಚಾಲಕರಿಗೆ ನೀಡುವ ಚಾಲನ ಪರ ವಾನಗಿಯನ್ನು ಆಗಾಗ ಪರಿಷ್ಕರಿಸಬೇಕು ಎಂದಿದ್ದು ಇದರ ಹಿಂದಿನ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next