Advertisement

“ಕೃಷಿ ಕ್ಷೇತ್ರದಲ್ಲಿ ಹೊಸ ಚಿಂತನೆಗಳ ಆವಶ್ಯಕತೆ’

12:46 AM Feb 12, 2021 | Team Udayavani |

ಕಾರ್ಕಳ: ಪ್ರಗತಿಪರ ಹಾಗೂ ಹೊಸ ಆಲೋಚನೆಗಳು ಇಂದಿನ ಅಗತ್ಯ. ಎಲ್ಲ ಕ್ಷೇತ್ರಗಳಲ್ಲಿ ಹೊಸ ಚಿಂತನೆ, ಅನ್ವೇಷಣೆಗಳು ಅದಂತೆ ಕೃಷಿ ಕ್ಷೇತ್ರದಲ್ಲೂ ಹೊಸ ತಾಂತ್ರಿಕತೆಗಳು, ಬೆಳೆಗಳು, ಹೊಸ ಚಿಂತನೆಗಳ ಅಳವಡಿಕೆ ಮುಖ್ಯವಾಗಿದೆ ಎಂದು ಮಿಯ್ನಾರು ಜಿ.ಪಂ. ಸದಸ್ಯ ದಿವ್ಯಾ ಗಿರೀಶ್‌ ಅಮೀನ್‌ ಅಭಿಪ್ರಾಯಪಟ್ಟರು.

Advertisement

ತೋಟಗಾರಿಕೆ ಇಲಾಖೆ ವತಿಯಿಂದ ಈದು ಗ್ರಾಮ ಪಂಚಾಯತ್‌ನ ಹೊಸ್ಮಾರು ಲೀಲಾ ಅವರು ನರ್ಸರಿ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಬೆಳೆಗಳ ಕ್ಷೇತ್ರೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳ ತಾ.ಪಂ. ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪಂಚಾಯತ್‌ ಸದಸ್ಯೆ ಮಂಜುಳಾ ವಿ. ಪೂಜಾರಿ, ಲೀಲಾ ನರ್ಸರಿ ಮಾಲಕ ಶಿವಾನಂದ ಶೆಣೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಜೀವವೈವಿಧ್ಯ ಮಂಡಳಿ ಸದಸ್ಯ ಡಾ| ಸತ್ಯನಾರಾಯಣ, ಕೆ.ವಿ.ಕೆ. ವಿಜ್ಞಾನಿ ಡಾ| ಚೈತನ್ಯ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಬಿ.ವಿ. ಪ್ರಸ್ತಾವನೆಗೈದು, ಸ್ವಾಗತಿಸಿದರು. ಲಕ್ಷ್ಮಣ ನಾಯ್ಕ ನಿರೂಪಿಸಿದರು.

100ಕ್ಕೂ ಅಧಿಕ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಿವಾನಂದ ಶೆಣೈ ಅವರು ಬೆಳೆದ ಡ್ರ್ಯಾಗನ್‌ ಹಣ್ಣು, ರಾಂಬೂಟನ್‌, ಮ್ಯಾಂಗೋಸ್ಟಿನ್‌, ಫ್ಯಾಶನ್‌ ಫ್ರೂಟ್‌, ಕಾಡುಪೀರೆ ಹಾಗೂ ಇತರ ಬೆಳೆಗಳ ತೋಟಗಳಿಗೆ ತೆರಳಿ ಪರಿಶೀಲಿಸಿ, ಮಾಹಿತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next