Advertisement

ನೂತನ ಸರ್ಕಾರಿ ಆಸ್ಪತ್ರೆ ಕಾಮಗಾರಿ ಕಳಪೆ

10:29 AM Jun 14, 2019 | Team Udayavani |

ಮಾಗಡಿ: ಕುದೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಆಸ್ಪತ್ರೆ ಸುಣ್ಣ ಬಣ್ಣ ಕಾಣುವ ಮುನ್ನವೇ ಸೋರಲಾರಂಭಿಸಿದೆ. ಕಳಪ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯರು ಎಂಜಿನಿಯರ್‌ ಅವರನ್ನು ಆಗ್ರಹಿಸಿದರು.

Advertisement

ತಾಪಂನಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರಾದ ಸುರೇಶ್‌, ಧನಂಜಯ ನಾಯಕ್‌ ಹಾಗೂ ನಾರಾಯಣಪ್ಪ ಅವರು ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಬೇಜವಾ ಬ್ದಾರಿಯಿಂದ ನಡೆದು ಕೊಂಡಿದ್ದಾರೆ ಎಂದು ಆರೋಪಿಸಿದರು. ಕಾಲಕಾಲಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರೆ ಗುಣಮಟ್ಟದ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ಹಲವು ವರ್ಷದಿಂದ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಮರೂರು ಆಸ್ಪತ್ರೆಯಲ್ಲಿದ್ದ ವೈದ್ಯೆ ಚಂದ್ರಕಲಾ ಅವರು ತಾಲೂಕು ವೈದ್ಯಾಧಿ ಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಹಾಗೂ ಕೆಲಸದ ಒತ್ತಡದಿಂದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿದೆ. ಮರೂರು ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಪಂಗೆ ಪತ್ರ ಬರೆಯಲಾಗುವುದು ಎಂದು ತಾಪಂ ಅಧ್ಯಕ್ಷ ಕೆ.ಎಚ್.ಶಿವರಾಜ್‌ ತಿಳಿಸಿದರು.

ಆರೋಗ್ಯ ಕೇಂದ್ರ ಸ್ಥಾಪನೆಗೆ ಭೂಮಿ ಅಗತ್ಯ: ಆರೋಗ್ಯ ಇಲಾಖೆಯ ಹಿರಿಯ ಶಿಕ್ಷಣಾಧಿಕಾರಿ ರಂಗನಾಥ್‌ ಮಾತನಾಡಿ, ಸರ್ಕಾರ ಪಿಎಚ್ಸಿ ಮಂಜೂರು ಮಾಡಿದೆ. ಮಾಡಬಾಳ್‌, ಶ್ರೀಗಿರಿಪುರ, ಚಿಕ್ಕ ಕಲ್ಯಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 2 ಎಕರೆ ಭೂಮಿ ಬೇಕಿದೆ. ಗ್ರಾಪಂ ಭೂಮಿ ಮಂಜೂರು ಮಾಡಿದರೆ, ಪಿಎಚ್ಸಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ 2 ಲಕ್ಷ ಠೇವಣಿ ಇಡಬೇಕಿದೆ. ಕ್ಷಯರೋಗಿಗಳ ಔಷಧೋಪಚಾರಕ್ಕೆ 500 ರೂ. ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.

ಅನ್‌ಲೈನ್‌ ಮೂಲಕ ಬಿತ್ತನೆ ಬೀಜ ವಿತರಣೆ: ಕೃಷಿ ಸಹಾಯಕ ನಿರ್ದೇಶಕ ಅಶೋಕ್‌ ಮಾತನಾಡಿ, ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಇನ್ನು ಮುಂದೆ ಅನ್‌ಲೈನ್‌ನಲ್ಲಿ ದಾಖಲೆ ನೋಂದಾಯಿಸಿ, ಜೈ ಕಿಸಾನ್‌ ಯೋಜನೆಯಡಿ ಪ್ರತಿ ಎಕರೆಗೆ 5 ಕೆ.ಜಿಯಂತೆ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು. ಇದಕ್ಕಾಗಿ ಎಂ.ಆರ್‌-1 ಮತ್ತು ಎಂ.ಆರ್‌-6 ಒಟ್ಟಾರೆ 252 ಕ್ವಿಂಟಲ್ ರಾಗಿ ದಾಸ್ತಾನು ಮಾಡಲಾಗಿದೆ. ಈಗಾಗಲೇ 25 ಕ್ವಿಂಟಲ್ ಸಹಾಯಧನದಲ್ಲಿ ವಿತರಣೆ ಮಾಡಿದೆ. ಪ್ರಸ್ತುತ 226 ಕ್ವಿಂಟಲ್ ದಾಸ್ತಾನು ಇದೆ. ತೊಗರಿ 500 ಕ್ವಿಂಟಲ್, ಅಲಸಂಧೆ 200 ಕ್ವಿಂಟಲ್, ಅವರೆ 50 ಕ್ವಿಂಟಲ್ ದಾಸ್ತಾನು ಮಾಡಿದ್ದು, ಬಹುತೇಕ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

Advertisement

ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ: ತಾಲೂಕಿನ ರೈತರು ಸಿರಿಧಾನ್ಯ ಬೆಳೆಯಲು ಸರ್ಕಾರ ಪ್ರೋತ್ಸಾಹಿಸಿದೆ. ಹೆಕ್ಟರ್‌ಗೆ 10 ಸಾವಿರ ರೂ. ಸಹಾಯಧನ ನೀಡುತ್ತಿದೆ. ನೈಸರ್ಗಿಕ ಕೃಷಿಗೆ ಶ್ರೀಗಿರಿಪುರ ಆಯ್ಕೆ ಮಾಡಲಾಗಿದೆ. 41 ಸಾವಿರ ರೈತರ ಭೂಮಿಗೆ ಸಂಬಂಧಿಸಿದ್ದಂತೆ ಮಣ್ಣಿನ ಆರೋಗ್ಯ ಕಾರ್ಡ್‌ ವಿತರಣೆ ಮಾಡಿದ್ದೇವೆ. ಮಣ್ಣಿಗೆ ಅಗತ್ಯ ಲಘುಪೋಷಕಾಂಶ ನೀಡಲಾಗುತ್ತಿದೆ ಎಂದರು.

ತಾಪಂನಿಂದ ತೆಂಗಿನ ಸಸಿ ವಿತರಣೆಗೆ ಕ್ರಮ: ತಾಪಂನಿಂದ 5 ಸಾವಿರ ತೆಂಗಿನ ಸಸಿ ಬೆಳಸಲಾಗಿದೆ. ಸಭೆಯಲ್ಲಿ ಅನಮೋದನೆ ಯಾಗಿದ್ದು, ಶೀಘ್ರದಲ್ಲಿಯೇ ಅರ್ಹ ರೈತರಿಗೆ ವಿತರಣೆ ಮಾಡಲಾಗುವುದು ಎಂದು ತಾಪಂ ಅಧ್ಯಕ್ಷ ಕೆ.ಎಚ್.ಶಿವರಾಜ್‌ ತಿಳಿಸಿದರು.

ತೆಂಗಿನ ಸಸಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸಸಿಗಳು ಖಾಲಿಯಾಗಿವೆ. ತರಕಾರಿ ಬೀಜ ಉಚಿತವಾಗಿ ರೈತರಿಗೆ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದರು.

ಪಶುಭಾಗ್ಯ ಫ‌ಲಾನುಭವಿಗಳಿಗೆ ಅನ್ಯಾಯ: ಕಳೆದ 3 ವರ್ಷಗಳ ಹಿಂದೆ ಪಶುಭಾಗ್ಯ ಯೋಜನೆಯಡಿ ಮಂಜೂರಾ ಗಿದ್ದ ಸಹಾಯ ಧನವನ್ನು ಫ‌ಲಾನುಭವಿಗ ಳಿಗೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಸದಸ್ಯ ನಾರಾಯಣಪ್ಪ, ಹನುಮಂತರಾಯಪ್ಪ ಆರೋಪಿಸಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಜರ್ನಾಧನ್‌ ಪ್ರತಿಕ್ರಿಯಿಸಿ, ಕೆಲವೊಂದು ಬ್ಯಾಂಕ್‌ಗಳ ಅಧಿಕಾರಿಗಳು ಸಾಲ ಮಂಜೂರು ಮಾಡಿಲ್ಲ. ಬಡ್ಡಿ ಹಣವನ್ನು ವಾಪಸ್ಸು ಮಾಡಿಲ್ಲ, ಇದರಿಂದ ಫ‌ಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ತಾಪಂ ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಶಂಕರ್‌, ಹನುಮಯ್ಯ, ನರಸಿಂಹಮೂರ್ತಿ, ವೆಂಕಟೇಶ್‌, ಸುಗುಣ, ಸುಧಾ, ಗಂಗಮ್ಮ, ಸುಮಾ ರಮೇಶ್‌, ರತ್ನಮ್ಮ, ಇಒ ಚಂದ್ರ, ಆಶಾ, ತಿಮ್ಮರಾಯಪ್ಪ, ಮಂಗಳಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next