Advertisement

ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ: ಸಚಿವ ಅಶೋಕ್‌

11:36 PM Aug 20, 2022 | Team Udayavani |

ಕಲಬುರಗಿ: ಗ್ರಾಮ ವಾಸ್ತವ್ಯ ಹೊಸ-ಹೊಸ ಅನುಭವ ನೀಡಿದ್ದು, ಪಾಠಶಾಲೆಯಾಗಿ ಪರಿಣಮಿಸಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಕಲಬುರಗಿ ಜಿಲ್ಲೆಯ ಸೇಡಂ ತಾಲೂ ಕಿನ ಆಡಕಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ 28,900 ಫಲಾನುಭವಿಗಳಿಗೆ ಸರಕಾರಿ ಸೌಲಭ್ಯಗಳ ಪ್ರಮಾಣ ಪತ್ರಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಸ್ತಿ ನೋಂದಣಿ ಶುಲ್ಕ
ಇಳಿಕೆ‌ಗೆ ಶೀಘ್ರ ಆದೇಶ
ಆಸ್ತಿ ನೋಂದಣಿ ಶುಲ್ಕ ಕಡಿಮೆ ಮಾಡುವ ಚಿಂತನೆ ನಡೆದಿದೆ. ಒಟ್ಟಾರೆ ನಿವೇಶನ, ಮನೆ, ಜಮೀನು ಖರೀದಿ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡುವ ಬಗ್ಗೆ ಶೀಘ್ರ ಆದೇಶ ಹೊರಡಿಸಲಾಗುವುದು. ರಿಯಾಯಿತಿ ನೀಡುವ ಬಗ್ಗೆ ಹಣಕಾಸು ಇಲಾಖೆಗೆ ಮನವರಿಕೆ ಹಾಗೂ ಸ್ವಲ್ಪ ತಕರಾರು ಮಾಡಿದ್ದರಿಂದ ವಿಳಂಬವಾಗುತ್ತಿದೆ. ಒಟ್ಟಾರೆ ಇದನ್ನು ಕಾರ್ಯರೂಪಕ್ಕೆ ತರುವುದು ನಿಶ್ಚಿತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next