Advertisement

ಸೈಬರ್‌ ರಣತಂತ್ರಕ್ಕೆ ಹೊಸ ಸಂಸ್ಥೆ

09:57 AM Nov 15, 2019 | mahesh |

ಹೊಸದಿಲ್ಲಿ: ದೇಶದ ಮೇಲೆ ವಿದೇಶಗಳಿಂದ ಸೈಬರ್‌ ದಾಳಿ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈವರೆಗೆ ಈ ಬಗ್ಗೆ ತನಿಖೆ ನಡೆಸಲು ಒಂದೇ ಒಂದು ಸಂಸ್ಥೆಯಿಲ್ಲ. ಈ “ಅರಾಜಕತೆ’ಗೆ ಕಡಿವಾಣ ಹಾಕಿ “ಸೈಬರ್‌ ರಣತಂತ್ರ’ ಹೆಣೆಯಲು ಹೊಸ ಸಂಸ್ಥೆಯೊಂದನ್ನು ರೂಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಈಚೆಗಷ್ಟೇ ಕುಂಡನ್‌ಕುಲಂನ ಪರಮಾಣು ವಿದ್ಯುತ್‌ ಕೇಂದ್ರದ ಮೇಲೆ ಸೈಬರ್‌ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸೈಬರ್‌ ಭಯೋತ್ಪಾದನೆಯನ್ನು ನಿಗ್ರಹಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ಹಲವು ಪ್ರಮುಖ ರಾಷ್ಟ್ರಗಳಲ್ಲಿ ಸೈಬರ್‌ ಭಯೋತ್ಪಾದನೆ ತಡೆಯಲು ಹಾಗೂ ಹಿಮ್ಮೆಟ್ಟಿಸಲು ಒಂದೇ ಸಂಸ್ಥೆ ಕಾರ್ಯಾಚರಿಸುತ್ತಿದೆ. ಬ್ರಿಟನ್‌ನಲ್ಲಿ ಸರಕಾರದ ಸಂವಹನ ಕೇಂದ್ರ ಸೈಬರ್‌ ಮೂಲ ಸೌಕರ್ಯಗಳ ರಕ್ಷಣೆಯ ಹೊಣೆ ಹೊತ್ತಿದೆ. ಅಮೆರಿಕ ದಲ್ಲಿ ನ್ಯಾಶನಲ್‌ ಸೆಕ್ಯೂರಿಟಿ ಏಜೆನ್ಸಿ ಹಾಗೂ ಸಿಂಗಾಪುರದಲ್ಲಿ ಸೈಬರ್‌ ಸೆಕ್ಯೂರಿಟಿ ಏಜೆನ್ಸಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಭಾರತದಲ್ಲಿ ಸೈಬರ್‌ ಅಪರಾಧ, ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆ ಗಳು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸು ತ್ತಿವೆ.

ಏಕೀಕೃತಗೊಂಡ ಸಂಸ್ಥೆ ರಚಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಜವಾಬ್ದಾರಿಯನ್ನು ಈಗ ರಾಷ್ಟ್ರೀಯ ಸೈಬರ್‌ ಭದ್ರತಾ ಸಂಯೋಜಕ ಲೆ|ಜ| ರಾಜೇಶ್‌ ಪಂಥ್‌ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಜಾರಿಗೆ ಬರಲಿರುವ ಸೈಬರ್‌ ಭದ್ರತಾ ನೀತಿಯಲ್ಲಿ ಈ ಅಂಶ ಸೇರಿಸಿಕೊಳ್ಳಲು ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next